ಪ್ರಧಾನಿ ನರೇಂದ್ರ ಮೋದಿ ನಿಜವಾದ ಹಿಂದೂ ಅಲ್ಲ. ನಿಜವಾದ ಹಿಂದೂಗಳು ಭೇದ-ಭಾವ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ರಾಹುಲ್ ಗಾಂಧಿ ಸೋಮನಾಥ ದೇಗುಲ ವಿವಾದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ನವದೆಹಲಿ (ನ.30): ಪ್ರಧಾನಿ ನರೇಂದ್ರ ಮೋದಿ ನಿಜವಾದ ಹಿಂದೂ ಅಲ್ಲ. ನಿಜವಾದ ಹಿಂದೂಗಳು ಭೇದ-ಭಾವ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ರಾಹುಲ್ ಗಾಂಧಿ ಸೋಮನಾಥ ದೇಗುಲ ವಿವಾದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ನಿನ್ನೆ ರಾಹುಲ್ ಗಾಂಧಿ ಸೋಮನಾಥ್ ದೇಗುಲಕ್ಕೆ ಹೋದಾಗ ರಿಜಿಸ್ಟರ್ ಬುಕ್'ನಲ್ಲಿ ಹಿಂದೂಯೇತರ ಎಂದು ನಮೂದಿಸಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಧರ್ಮ ಪ್ರಶ್ನಿಸಿದವರ ವಿರುದ್ಧ ಕಪಿಲ್ ವಾಗ್ದಾಳಿ ನಡೆಸುತ್ತಾ, ಹಿಂದೂ ಧರ್ಮ ಆಚರಣೆಯನ್ನೇ ಬಿಟ್ಟಿರುವ ಪ್ರಧಾನಿ ಮೋದಿ ಹಿಂದುತ್ವದ ಬಗ್ಗೆ ವಾದಿಸುತ್ತಿದ್ದಾರೆ. ನಿಜವಾದ ಹಿಂದೂಗಳು ಈ ರೀತಿ ಭೇದ ಭಾವ ಮಾಡುವುದಿಲ್ಲ. ಪ್ರಧಾನಿ ಮೋದಿ ಎಷ್ಟು ಬಾರಿ ದೇವಸ್ಥಾನಕ್ಕೆ ಹೋಗಿದ್ದಾರೆ? ಎಂದು ಕಪಿಲ್ ಸಿಬಲ್ ಟೀಕಿಸಿದ್ದಾರೆ.