ಐ.ಟಿ.ಕ್ಷೇತ್ರದಲ್ಲೂ ಸರ್ಜಿಕಲ್ ದಾಳಿ ನಡೆಸಲು ಮೋದಿ ಚಿಂತನೆ !

Published : Oct 23, 2016, 01:29 PM ISTUpdated : Apr 11, 2018, 01:10 PM IST
ಐ.ಟಿ.ಕ್ಷೇತ್ರದಲ್ಲೂ ಸರ್ಜಿಕಲ್ ದಾಳಿ ನಡೆಸಲು ಮೋದಿ ಚಿಂತನೆ !

ಸಾರಾಂಶ

ಅಕ್ರಮ ಆದಾಯ ಬಹಿರಂಗಪಡಿಸುವ ಯೋಜನೆಯಿಂದ 65 ಸಾವಿರ ಕೋಟಿ ಸಂಗ್ರಹವಾಗಿದೆ

ವಡೋದರಾ(ಅ.23): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆ ನಡೆಸಿದ ಸರ್ಜಿಕಲ್ ದಾಳಿ ನಡೆಸಿದಂತೆ ಕಪ್ಪುಹಣ ಪತ್ತೆಗೂ ಅನುಸರಿಸಿದರೆ ಹೇಗಿರುತ್ತದೆ? ಈ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಕ್ರಮ ಆದಾಯ ಬಹಿರಂಗಪಡಿಸುವ ಯೋಜನೆಯಿಂದ 65 ಸಾವಿರ ಕೋಟಿ ಸಂಗ್ರಹವಾಗಿರುವುದನ್ನು ಅವರು ಪ್ರಸ್ತಾಪಿಸಿದರು.

ವಿವಿಧ ಯೋಜನೆಗಳ ಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಅದರ ಮೂಲಕ ನೀಡಲಾಗುವ ಸಬ್ಸಿಡಿ ಹಣವನ್ನು ಖಾತೆಗೆ ವರ್ಗಾಯಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ 36 ಸಾವಿರ ಕೋಟಿ ಸೋರಿಕೆಯಾಗುವುದನ್ನು ತಪ್ಪಿಸಿದ್ದೇವೆ. ಈ ಮೂಲಕ ಒಟ್ಟು 1 ಲಕ್ಷ ಕೋಟಿಯನ್ನು ಉಳಿತಾಯ ಮಾಡಿದಂತಾಗಿದೆ ಎಂದು ಅವರು ಹೇಳಿದ್ದಾರೆ. ಆದಾಯ ಸೋರಿಕೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಇಷ್ಟು ಮೊತ್ತ ಉಳಿಕೆ ಮಾಡಿದ್ದೇವೆ. ಇನ್ನು ಸರ್ಜಿಕಲ್ ದಾಳಿಯಂಥ ಕ್ರಮ ಅನುಸರಿಸಿದರೆ ಹೇಗಿರುತ್ತದೆ ಎಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಟ್ಕಳ ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ: ಇಮೇಲ್‌ನಲ್ಲಿ ಡಿಎಂಕೆ ವಿರುದ್ಧ ಅಸಂಬದ್ಧ ಆರೋಪ
ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ