ನವದೆಹಲಿಯಲ್ಲಿ ವೀರ ಯೋಧರಿಗೆ ಅಂತಿಮ ನಮನ| ಹುತಾತ್ಮ ಯೋಧರ ಅಂತಿಮ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ| ಯೋಧರ ಕಳೆಬರಹಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೌರವ ಸಲ್ಲಿಕೆ| ಸ್ವಂತ ಊರುಗಳತ್ತ ಹುತಾತ್ಮ ಯೋಧರ ಕಳೆಬರಹ|
ನವದೆಹಲಿ(ಫೆ.15): ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ CRPF ವೀರ ಯೋಧರಿಗೆ ನವದೆಹಲಿಯಲ್ಲಿ ಗಣ್ಯರಿಂದ ಅಂತಿಮ ನಮನ ಸಲ್ಲಿಸಲಾಯಿತು.
live from Delhi: Wreath laying ceremony of the CRPF jawans at Palam Airport. https://t.co/WF8fVaDjX6
— ANI (@ANI)ಪ್ರಧಾನಿ ನರೇಂದ್ರ, ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಯೋಧರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಮುಖ್ಯಸ್ಥರೂ ಕೂಡ ಹುತಾತ್ಮ ಯೋಧರ ಅಂತಿಮ ದರ್ಶನ ಪಡೆದರು.
Delhi: Prime Minister Narendra Modi lays wreath on the mortal remains of the CRPF jawans. pic.twitter.com/59BBNzTmBI
— ANI (@ANI)ಹುತಾತ್ಮರ ಕಳೆಬರಹದ ಸುತ್ತ ಒಂದು ಸುತ್ತು ತಿರುಗಿದ ಪ್ರಧಾನಿ ಮೋದಿ, ಯೋಧರ ಕಳೆಬರಹಕ್ಕೆ ಕೈ ಮುಗಿಯುತ್ತಾ ಮುನ್ನಡೆದರು. ಈ ವೇಳೆ ಇಡೀ ಸಭಾಂಗಣದಲ್ಲಿ ಮೌನ ಆವರಿಸಿತ್ತು.
Delhi: Congress President Rahul Gandhi and Union Minister Rajyavardhan Singh Rathore lay wreaths on the mortal remains of the CRPF jawans. pic.twitter.com/I0gOjmriEV
— ANI (@ANI)