ಮತಾಂತರಿ ಎನ್‌ಜಿಒಗಳಿಗೆ ಇನ್ನು ವಿದೇಶಿ ದೇಣಿಗೆ ಸಿಗಲ್ಲ!

Published : Sep 18, 2019, 10:56 AM IST
ಮತಾಂತರಿ ಎನ್‌ಜಿಒಗಳಿಗೆ ಇನ್ನು ವಿದೇಶಿ ದೇಣಿಗೆ ಸಿಗಲ್ಲ!

ಸಾರಾಂಶ

ಮತಾಂತರಿ ಎನ್‌ಜಿಒಗಳಿಗೆ ಇನ್ನು ವಿದೇಶಿ ದೇಣಿಗೆ ಸಿಗಲ್ಲ| ದೇಣಿಗೆ ಬೇಕೆಂದರೆ ಮತಾಂತರ ಕೇಸಿಲ್ಲ ಎಂದು ಘೋಷಿಸಿಕೊಳ್ಳಬೇಕು| ಕೇಂದ್ರ ಗೃಹ ಸಚಿವಾಲಯದಿಂದ ಅಧಿಸೂಚನೆ

ನವದೆಹಲಿ[ಸೆ.18]: ವಿದೇಶದಿಂದ ಅಪಾರ ದೇಣಿಗೆ ಪಡೆದು ಮತಾಂತರ ನಡೆಸುತ್ತಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎನ್‌ಜಿಒಗಳಿಗೆ (ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು) ಮೂಗುದಾರ ಹಾಕಿದೆ. ಯಾವುದೇ ಎನ್‌ಜಿಒ ವಿದೇಶದಿಂದ ದೇಣಿಗೆ ಪಡೆಯಲು ಬಯಸಿದಲ್ಲಿ, ಮತಾಂತರ ಆರೋಪ ಸಂಬಂಧ ತಮ್ಮ ವಿರುದ್ಧ ವಿಚಾರಣೆ ನಡೆದಿಲ್ಲ ಅಥವಾ ಅಂತಹ ಪ್ರಕರಣದಲ್ಲಿ ತಾವು ಈ ಹಿಂದೆ ದೋಷಿಯೂ ಆಗಿಲ್ಲ ಎಂದು ಎನ್‌ಜಿಒದ ಪ್ರತಿಯೊಬ್ಬ ನೌಕರ ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಘೋಷಣೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಈ ಕುರಿತು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಹಾಗೂ ಕೋಮುಗಲಭೆ, ಅಸೌಹಾರ್ದತೆ ಸೃಷ್ಟಿಆರೋಪ ಸಂಬಂಧ ವಿಚಾರಣೆ ಎದುರಿಸಿಲ್ಲ ಎಂದು ಎನ್‌ಜಿಒಗಳ ಪ್ರತಿ ಪದಾಧಿಕಾರಿ, ಅಧಿಕಾರಿ, ನೌಕರರು ಘೋಷಣೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಅಧಿಸೂಚನೆ ತಿಳಿಸಿದೆ. ಈವರೆಗೆ ಎನ್‌ಜಿಒದ ಓರ್ವ ನಿರ್ದೇಶಕ ಮಾತ್ರ ಈ ರೀತಿಯ ಘೋಷಣೆ ಮಾಡಿಕೊಂಡಿದ್ದರೆ ಸಾಕಿತ್ತು.

ಮತ್ತೊಂದೆಡೆ, ದೇಶದ್ರೋಹ ಅಥವಾ ಹಿಂಸಾ ಮಾರ್ಗವನ್ನು ಪ್ರಚುರಪಡಿಸಿಲ್ಲ ಹಾಗೂ ವಿದೇಶಿ ದೇಣಿಗೆಯನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿಲ್ಲ ಎಂದು ಎನ್‌ಜಿಒದ ಪ್ರತಿಯೊಬ್ಬ ಸದಸ್ಯರೂ ಘೋಷಣೆ ಮಾಡಿಕೊಳ್ಳಬೇಕು ಎಂದೂ ಸೂಚನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್