ಝಾಕಿರ್ ಗಡೀಪಾರು: ಪಿಎಂ ಮೋದಿಗೆ ಉಲ್ಟಾ ಹೊಡೆದ, ಮಲೇಷ್ಯಾ ಪ್ರಧಾನಿ!

Published : Sep 18, 2019, 10:11 AM ISTUpdated : Sep 18, 2019, 11:03 AM IST
ಝಾಕಿರ್ ಗಡೀಪಾರು: ಪಿಎಂ ಮೋದಿಗೆ ಉಲ್ಟಾ ಹೊಡೆದ, ಮಲೇಷ್ಯಾ ಪ್ರಧಾನಿ!

ಸಾರಾಂಶ

ಝಾಕಿರ್‌ ಗಡಿಪಾರಿಗೆ ಮೋದಿ ಕೋರಿಲ್ಲ; ಮಲೇಷ್ಯಾ ಪ್ರಧಾನಿ; ಇದು ಸುಳ್ಳು: ಸಚಿವ ಜೈಶಂಕರ್‌|  ಮಲೇಷ್ಯಾದ ರೇಡಿಯೋ ಚಾನೆಲ್‌ಗೆ ನೀಡಿರುವ ಸಂರ್ದಶನದಲ್ಲಿ ಮಾತು!

ಕೌಲಾಲಂಪುರ[ಸೆ.18]: ವಿವಾದಿತ ಇಸ್ಲಾಂ ಧರ್ಮಪ್ರಚಾರಕ ಝಾಕಿರ್‌ ನಾಯ್‌್ಕನನ್ನು ಗಡಿಪಾರು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಕೋರಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹಥೀರ್‌ ಮೊಹಮ್ಮದ್‌ ಹೇಳಿದ್ದಾರೆ.

ಮಲೇಷ್ಯಾದ ರೇಡಿಯೋ ಚಾನೆಲ್‌ಗೆ ನೀಡಿರುವ ಸಂರ್ದಶನದಲ್ಲಿ ಈ ಮಾತನ್ನಾಡಿರುವ ಮಹಥೀರ್‌, ಝಾಕಿರ್‌ ಯಾರಿಗೂ ಬೇಕಾಗಿಲ್ಲ. ಆತನನ್ನು ಭಾರತಕ್ಕೆ ಗಡಿಪಾರು ಮಾಡಿದರೆ ಭಾರತಕ್ಕೂ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಆತನನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಮಲೇಷ್ಯಾ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಆದರೆ ಮಹಥೀರ್‌ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ತಳ್ಳಿಹಾಕಿದ್ದಾರೆ. ರಷ್ಯಾದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ವೇಳೆ ಮೋದಿ ಮತ್ತು ಮಹಥೀರ್‌ ಭೇಟಿಯಾದಾಗ, ಝಾಕಿರ್‌ ವಿಷಯ ಪ್ರಸ್ತಾಪವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ