ಉಕ್ಕಿನ ಸೇತುವೆ ಸ್ವೇಚ್ಛಾ, ಕಾನೂನುಬಾಹಿರ ಯೋಜನೆ!

Published : Oct 10, 2016, 03:57 AM ISTUpdated : Apr 11, 2018, 01:02 PM IST
ಉಕ್ಕಿನ ಸೇತುವೆ ಸ್ವೇಚ್ಛಾ, ಕಾನೂನುಬಾಹಿರ ಯೋಜನೆ!

ಸಾರಾಂಶ

ಬಸವೇಶ್ವರ ವೃತ್ತದಿಂದ ಹೆಬ್ಬಾಳ​ದವರೆಗೆ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆಯನ್ನು ಗೋಪ್ಯ­ವಾಗಿರಿಸಲಾಗುತ್ತಿದ್ದು, ಸಾರ್ವಜನಿಕ​ರಿಗೆ ಮಾಹಿತಿ ನೀಡುತ್ತಿಲ್ಲ. ಯೋಜನೆ ಅನುಷ್ಠಾನಕ್ಕೂ ಮುನ್ನ ಬಿಡಿಎ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಯೋಜನೆ ಕುರಿತಾದ ಲೆಕ್ಕಪತ್ರಗಳನ್ನು ಕಂಟ್ರೋಲರ್‌ ಆಂಡ್‌ ಆಡಿಟರ್‌ ಜನರಲ್‌ ನಡೆಸಬೇಕು ಎಂದು ಆಗ್ರಹಿಸಿ ನಮ್ಮ ಬೆಂಗಳೂರು ಪ್ರತಿಷ್ಠಾ​ನವು ರಿಟ್‌ ಅರ್ಜಿ ಸಲ್ಲಿಸಿದ್ದು, ಉಚ್ಛ ನ್ಯಾಯಾಲಯವು ಅರ್ಜಿ ಮೇಲಿನ ತೀರ್ಪು ಆಧರಿಸಿಯೇ ಯೋಜನೆ ಅನುಷ್ಠಾನಗೊಳಿ​ಸುವಂತೆ ತಾಕೀತು ಮಾಡಿದೆ.  

ಬೆಂಗಳೂರು (ಅ.10): ಬಸವೇಶ್ವರ ವೃತ್ತದಿಂದ ಹೆಬ್ಬಾಳ​ದವರೆಗೆ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆಯನ್ನು ಗೋಪ್ಯ­ವಾಗಿರಿಸಲಾಗುತ್ತಿದ್ದು, ಸಾರ್ವಜನಿಕ​ರಿಗೆ ಮಾಹಿತಿ ನೀಡುತ್ತಿಲ್ಲ. ಯೋಜನೆ ಅನುಷ್ಠಾನಕ್ಕೂ ಮುನ್ನ ಬಿಡಿಎ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಯೋಜನೆ ಕುರಿತಾದ ಲೆಕ್ಕಪತ್ರಗಳನ್ನು ಕಂಟ್ರೋಲರ್‌ ಆಂಡ್‌ ಆಡಿಟರ್‌ ಜನರಲ್‌ ನಡೆಸಬೇಕು ಎಂದು ಆಗ್ರಹಿಸಿ ನಮ್ಮ ಬೆಂಗಳೂರು ಪ್ರತಿಷ್ಠಾ​ನವು ರಿಟ್‌ ಅರ್ಜಿ ಸಲ್ಲಿಸಿದ್ದು, ಉಚ್ಛ ನ್ಯಾಯಾಲಯವು ಅರ್ಜಿ ಮೇಲಿನ ತೀರ್ಪು ಆಧರಿಸಿಯೇ ಯೋಜನೆ ಅನುಷ್ಠಾನಗೊಳಿ​ಸುವಂತೆ ತಾಕೀತು ಮಾಡಿದೆ.

ಯೋಜನೆಗೆ ತಡೆ ನೀಡುವಂತೆ ರಿಟ್‌ ಅರ್ಜಿಯಲ್ಲಿ ಮನವಿ ಮಾಡಲಾಗಿದ್ದು, ಯೋಜನೆಯು ರಿಟ್‌ ಅರ್ಜಿಯ ಆದೇಶಕ್ಕೆ ಅನ್ವಯವಾಗಿರುತ್ತ​ದೆಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಸೇತುವೆ ನಿರ್ಮಾಣಕ್ಕೆ ಒಟ್ಟು ರೂ.1800 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸ­ಲಾಗಿದೆ. ಮೇಕ್ರಿ ವೃತ್ತದ ಮೂಲಕ ಹಾದು ಹೋಗುವ ಈ ಉಕ್ಕಿನ ಸೇತುವೆಯ ವಿವರ­ವಾದ ಯೋಜ​ನಾ ವರದಿ(ಡಿಪಿಆರ್‌), ಕಾರ್ಯ ಸಾಧ್ಯತೆ, ಯೋಜನೆಗೆ ಹಣಕಾಸು ಹೊಂದಾಣಿಕೆ ಇವುಗಳ ಕುರಿತಾದ ಮಾಹಿತಿ­ಗಳನ್ನು ಸಾರ್ವ​ಜನಿ​ಕರಿಗೆ ನೀಡಲಾ­ಗುತ್ತಿಲ್ಲ. ಹೀಗಾಗಿ ಈ ಯೋಜನೆಯು ಸಾರ್ವ­ಜನಿಕ ಹಿತಾಸಕ್ತಿ ಹೊಂದಿ​ರದೇ ಸ್ವೇಚ್ಛೆ­ಯಿಂದ, ಕಾನೂನುಬಾಹಿ​ರವಾಗಿ, ತರ್ಕ­ರಹಿತ­ವಾಗಿ ರೂಪಿತವಾಗಿರು​ವಂತಿದೆ. ಯೋಜ­ನೆಯ ಕ್ರಮ​ಬದ್ಧತೆಯೂ ಸಂಶ­ಯಾಸ್ಪದವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಒಟ್ಟು 6.7ಕಿಮೀ ಉದ್ದದ ಉಕ್ಕಿನ ಮೇಲ್ಸೆತುವೆಗೆ ಸಚಿವ ಸಂಪುಟವು ಅನುಮೋದನೆ ನೀಡಿದ್ದು ವಿಮಾನ ನಿಲ್ಧಾಣಕ್ಕೆ ಜೋಡಿಸಲು ಉದ್ದೇಶಿಸಲಾಗಿದೆ. ಮೊದಲು ರೂ.1350 ಕೋಟಿ ಇದ್ದ ಯೋಜನೆ ರೂ.1800ಕೋಟಿಗೆ ಏರಿಕೆಯಾ­ಗಿದ್ದು 24 ತಿಂಗಳಲ್ಲಿ ಪೂರ್ಣಗೊಳ್ಳುವುದಾಗಿ ಹೇಳಲಾ​ಗಿದೆ. 55 ಸಾವಿರ ಟನ್‌ ಉಕ್ಕು ಬಳಸಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ವಾಹನಗಳ ದಟ್ಟಣೆ ಕಡಿಮೆ ಮಾಡಲು ಈ ಸೇತುವೆ ನಿರ್ಮಾಣ ಮಾಡುತ್ತಿದ್ದು ನಿರ್ಮಾಣ ಸಂಸ್ಥೆ ಲಾರ್ಸೆನ್‌ ಅಂಡ್‌ ಟಬೋ ಟೆಂಡರ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಒಟ್ಟು ಯೋಜನೆಯಲ್ಲಿ ಪಾರ­ದರ್ಶಕತೆ ಕಂಡು ಬರುತ್ತಿಲ್ಲ. ಸಾರ್ವಜನಿಕವಾಗಿಯೂ ಯೋಜ​ನೆ ಸಾಧಕ ಬಾಧಕ ಕುರಿತು ಚರ್ಚೆ ನಡೆಸಲಾಗಿಲ್ಲ. ಯೋಜನೆ ಕುರಿತಾಗಿ ಜನಪ್ರ​ತಿನಿಧಿಗಳು ನೀಡುತ್ತಿರುವ ಹೇಳಿಕೆ ಹಾಗೂ ಯೋಜನೆಯ ವಿವರಗಳು ತಾಳೆಯಾ​ಗುತ್ತಿಲ್ಲ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸೇರಿ​ದಂತೆ ಯೋಜನೆಯ ಅನುಷ್ಠಾನ ಕುರಿತ ಯಾವುದೇ ಅಂಶಗಳ ಮಾಹಿತಿ ಸಾರ್ವಜನಿಕರ ಪರಿಶೀಲ​ನೆಗೆ ದೊರೆಯುತ್ತಿಲ್ಲವೆಂದು ಅರ್ಜಿ ತಿಳಿಸಿದೆ.

ಶೇ.40ರಷ್ಟುಹೆಚ್ಚು ವೆಚ್ಚ: ಯೋಜನೆಯನ್ನು ಇದೀಗ ಅಂದಾಜಿಸಿರುವ ವೆಚ್ಚಕ್ಕಿಂತಲೂ ಶೇ.40ರಷ್ಟುಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದೆಂದು ಕೆಲವು ತಜ್ಞರು ಅಂದಾ­ಜಿಸಿದ್ದು ಯೋಜನೆಯ ವೆಚ್ಚವನ್ನು ಯಾವ ಮೂಲಗಳಿಂದ ಭರಿಸಲಾ­ಗುತ್ತಿದೆ ಎಂಬ ಕುರಿತು ಸ್ಪಷ್ಟತೆ ಇಲ್ಲದಾಗಿದೆ. ಸೇತುವೆ ನಿರ್ಮಾಣಕ್ಕೆ ಅಗತ್ಯ ಭೂಮಿ ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ. ಭೂ ಸ್ವಾಧೀನ ಮಾಡದೇ ಆರಂಭಿಸುವ ಬಹುತೇಕ ಯೋಜನೆಗಳು ಅರ್ಧದಲ್ಲೇ ಸ್ಥಗಿತಗೊಂಡ ಉದಾಹರಣೆಗಳಿದ್ದು ಈ ಯೋಜನೆಗೂ ಅದೇ ಗತಿ ಉಂಟಾಗಬಹುದು ಎಂದು ರಿಟ್‌ ಅರ್ಜಿಯಲ್ಲಿ ವಿವರಿಸಲಾಗಿದೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ
ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ