ಈರೋಡಿನ ಭವಾನಿ ಸಾಗರ ಅಣೆಕಟ್ಟು ಪರಿಶೀಲಿಸುವ ತಂಡ, ಬಳಿಕ ತಂಜಾವೂರು, ತಿರವರೂರು, ನಾಗಪಟ್ಟಿಣಂ ಜಿಲ್ಲೆಗಳಿಗೆ ಭೇಟಿ
ಕೊಯಮತ್ತೂರು: ಕರ್ನಾಟಕದಲ್ಲಿ ಎರಡು ದಿನಗಳ ಅಧ್ಯಯನ ಮುಗಿಸಿದ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ 13 ಸದಸ್ಯರ ತಂಡ ಭಾನುವಾರ ಮೆಟ್ಟೂರು ತಲುಪಿ ಅಣೆಕಟ್ಟಿನ ನೀರಿನ ಮಟ್ಟ, ಒಳ ಹರಿವು, ಹೊರಹರಿವಿನ ಪ್ರಮಾಣವನ್ನು ಪರಿಶೀಲಿಸಿದೆ.
ಈ ವೇಳೆ ಅಲ್ಲಿನ ಸಚಿವ ಎಡಪಡಿ ಪಳನಿಸಾಮಿ ರಾಜ್ಯದ ಹಿತ ಕಾಯಬೇಕೆಂದು ತಂಡಕ್ಕೆ ಮನವಿ ಸಲ್ಲಿಸಿದ್ದಾರೆ. ಸೋಮವಾರ ಈರೋಡಿನ ಭವಾನಿ ಸಾಗರ ಅಣೆಕಟ್ಟು ಪರಿಶೀಲಿಸುವ ತಂಡ, ಬಳಿಕ ತಂಜಾವೂರು, ತಿರವರೂರು, ನಾಗಪಟ್ಟಿಣಂ ಜಿಲ್ಲೆಗಳಿಗೆ ಭೇಟಿ ನೀಡಲಿದೆ.