
ಕಲಬುರಗಿ (ಏ.15): ಒಂದು ಕಡೆ ಪ್ರಿಯಕರ ಮಾಡಿರುವ ಮೋಸ, ನ್ನೊಂದೆಡೆ ಗೈಡ್ ಕೊಡುತ್ತಿರುವ ಕಿರುಕುಳ ತಾಳಲಾರದೇ ಪಿಎಚ್’ಡಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೆ ಹಳಿ, ರೈಲಿಗೆ ತಲೆಕೊಟ್ಟು ಪಿಎಚ್ಡಿ ವಿದ್ಯಾರ್ಥಿನಿ ಶ್ರೀದೇವಿ (31) ತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಲಬುರಗಿ ವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್’ಡಿ ಮಾಡುತ್ತಿರುವ ಶ್ರೀದೇವಿ ಆತ್ಮಹತ್ಯೆ ಮಾಡುವ ಮುಂಚೆ ಡೆತ್’ನೋಟ್ ಬರೆದಿಟ್ಟಿದ್ದು, ತಿಪ್ಪಣ್ಣ ಕಲ್ಮನಿ ಎಂಬ ಯುವಕ ಮೋಸ ಮಾಡಿರುವುದಾಗಿ ಹಾಗೂ ಪಿಎಚ್’ಡಿ ಗೈಡ್ ಡಾ.ಸಿದ್ದಪ್ಪ ವಿರುದ್ಧ ಹಣಕ್ಕಾಗಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಾಳೆ. ಮೌಖಿಕ ಪರೀಕ್ಷೆಗೆ ಡಾ.ಸಿದ್ದಪ್ಪ ಆಕೆಯ ಬಳಿ ಹಣದ ಬೇಡಿಕೆ ಇಟ್ಟಿದ್ದಾರೆಂದು ಡೆತ್ನೋಟ್’ನಲ್ಲಿ ಬರೆಯಲಾಗಿದೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.