ಸೋಮವಾರ ಭಾರತ್ ಬಂದ್ :ಕರ್ನಾಟಕದಲ್ಲಿ ಹೇಗಿರುತ್ತೆ ಎಫೆಕ್ಟ್?

Published : Sep 08, 2018, 11:42 AM ISTUpdated : Sep 09, 2018, 09:40 PM IST
ಸೋಮವಾರ ಭಾರತ್ ಬಂದ್ :ಕರ್ನಾಟಕದಲ್ಲಿ ಹೇಗಿರುತ್ತೆ ಎಫೆಕ್ಟ್?

ಸಾರಾಂಶ

ಸೋಮವಾರ ಭಾರತ್ ಬಂದ್‌ಗೆ ಕಾಂಗ್ರೆಸ್ ಕರೆ | ಕೆಲವು ಸಂಘಟನೆಗಳ ಬೆಂಬಲ ಈಗಾಗಲೇ ಘೋಷಣೆ | ಇನ್ನು ಕೆಲವು ಸಂಘಟನೆಗಳು ಸಂಜೆ ವೇಳೆಗೆ ಘೋಷಿಸಲಿವೆ | ಕರ್ನಾಟಕದಲ್ಲಿ ಹೇಗಿರುತ್ತೆ ಎಫೆಕ್ಟ್? ಇಲ್ಲಿದೆ ಡಿಟೇಲ್ಸ್.

ಬೆಂಗಳೂರು (ಸೆ. 08): ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಸೆ.10 ರಂದು ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿರುವ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಸೆ . 10 ರಂದು ರಾಜ್ಯದಲ್ಲಿಯೂ ಭಾರತ್ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.   

ಎಐಟಿಯುಸಿ ನೇತೃತ್ವದ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕ್ಸ್ ಫೆಡರೇಷನ್‌, ಓಲಾ, ಉಬರ್, ಟ್ಯಾಕ್ಸಿ ಮಾಲಿಕರ ಮತ್ತು ಚಾಲಕ ಸಂಘ, ಕೆಲ ಆಟೋ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಹಾಗಾಗಿ ಕೆಎಸ್‌ಆರ್‌ಟಿಸಿ ರಸ್ತೆಗಿಳಿಯುವುದು ಬಹುತೇಕ ಅನುಮಾನ. ಕಚೇರಿಗೆ ಸಾರ್ವಜನಿಕ ಸಾರಿಗೆಯನ್ನು ನಂಬಿಕೊಂಡವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. 

ಲಾರಿ ಮಾಲೀಕರ ಸಂಘ , ಬೆಂಗಳೂರು ಪ್ರವಾಸಿ ವಾಹನಗಳ ಮಾಲೀಕ ಸಂಘ ಬಂದ್ ಗೆ ಬೆಂಬಲ ನೀಡಿಲ್ಲ.  ಹೂವು, ಹಣ್ಣಿನ ವ್ಯಾಪಾರದ ಮೇಲೆ ಬಂದ್ ಎಫೆಕ್ಟ್ ಕಡಿಮೆ ಇದೆ.  ಸೋಮವಾರ ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತದೆಯಾ? ಇಲ್ಲವಾ? ಎಂಬುದು ಇನ್ನೂ ನಿರ್ಧಾರವಾಗಿಲ್ಲ. 

ಒಂದೇ ಸಮನೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಇದರಿಂದ ಹೊರೆಯಾಗುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಸೆ. 10 ಕ್ಕೆ ಭಾರತ್ ಬಂದ್ ಗೆ ಕರೆ ನೀಡಿದೆ. ಈ ಪ್ರತಿಭಟನೆಗೆ ಎಡಪಕ್ಷಗಳು ಸೇರಿದಂತೆ ಎನ್ ಡಿಎ ವಿರೋಧಿಗಳು ಬೆಂಬಲ ಸೂಚಿಸಿದ್ದಾರೆ. 

-ಸಾಂದರ್ಭಿಕ ಚಿತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ; ಅಧಿಕಾರ ಸ್ವೀಕರಿಸಿ 1 ದಿನಕ್ಕೆ ವರಿಷ್ಠಾಧಿಕಾರಿ ಪವನ್ ನೆಜ್ಜೂರು ಸಸ್ಪೆಂಡ್!
ಕೋಗಿಲು ಲೇಔಟ್‌ನಲ್ಲಿ 167 ಮನೆಗಳು ನೆಲಸಮ: ಆದ್ರೆ ಹೊಸ ಫ್ಲ್ಯಾಟ್‌ ಪಡೆಯಲು 250 ಅರ್ಜಿ ಸಲ್ಲಿಕೆ!