
ಉಡುಪಿ (ಜ.30): ಉಡುಪಿಯ ಪೇಜಾವರ ಮಠಾಧೀಶರ ಸಹಿತ ಅಷ್ಟಮಠಾಧೀಶರ ವಿರುದ್ಧ ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ಅಷ್ಟಮಠಾಧೀಶರಲ್ಲಿ ಒಮ್ಮತ ಮೂಡಬೇಕು ಎಂಬ ಕಾರಣಕ್ಕೆ ಒಂದು ಲಿಖಿತ ಸಂವಿಧಾನ ತಯಾರಾಗಬೇಕು ಎಂದು ಈ ದಾವೆಯಲ್ಲಿ ಬೇಡಿಕೆ ಇರಿಸಲಾಗಿದೆ.
ವಿಶ್ವವಿಜಯ ಸ್ವಾಮಿಜಿ
ಪೇಜಾವರ ಮಠದ ಕಿರಿಯ ಮಠಾಧೀಶರಾಗಿದ್ದ ವಿಶ್ವ ವಿಜಯರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. 80ರ ದಶಕದಲ್ಲಿ ಇವರು ಸಾಗರೋಲ್ಲಂಘನ ಮಾಡಿ ಅಮೇರಿಕಾಗೆ ಹೋಗಿದ್ದರು ಎಂಬ ಕಾರಣಕ್ಕೆ ಪೀಠತ್ಯಾಗ ಮಾಡಬೇಕಾಗಿ ಬಂದಿತ್ತು.
ಲಿಖಿತ ಸಂವಿಧಾನ ಇಲ್ಲದ ಕಾರಣ, ಪರ್ಯಾಯೋತ್ಸವ ಸಂದರ್ಭದಲ್ಲಿ ಗೊಂದಲವಾಗುತ್ತಿದೆ.ಇದರಿಂದ ಸಂಸ್ಥಾನಕ್ಕೆ ಅಪಚಾರವಾಗುತ್ತಿದೆ ಹಾಗಾಗಿ ಸಂಪ್ರದಾಯಗಳನ್ನು ಕ್ರೋಢಿಕರಿಸಿ ಲಿಖಿತ ಸಂವಿಧಾನ ರಚನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವ ವಿಜಯರ ಪರವಾಗಿ ಮಂಗಳರಿನ ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ದಾವೆ ಹೂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.