ಸಾಲ ಕೊಟ್ಟು ಮೀಟರ್ ಬಡ್ಡಿ ಕೇಳಿದ್ರು!: ಮೀಟರ್ ಬಡ್ಡಿಗೆ ನೋ ಅಂದಿದ್ಕಕ್ಕೆ ಆತನ ಮೇಲೆಯೇ ಹಲ್ಲೆ

Published : May 24, 2017, 09:45 AM ISTUpdated : Apr 11, 2018, 01:10 PM IST
ಸಾಲ ಕೊಟ್ಟು ಮೀಟರ್ ಬಡ್ಡಿ ಕೇಳಿದ್ರು!: ಮೀಟರ್ ಬಡ್ಡಿಗೆ ನೋ ಅಂದಿದ್ಕಕ್ಕೆ ಆತನ ಮೇಲೆಯೇ ಹಲ್ಲೆ

ಸಾರಾಂಶ

ಕೊಟ್ಟ ಸಾಲ ಕೋಡುವುದು ತಡವಾಗಿದ್ದೇಕೆ ಆತನ ಮೇಲೆ ಆ ಗ್ಯಾಂಗ್​​ ಮಾರಣಾಂತಿಕ ಹಲ್ಲೆ ನಡೆಸಿದೆ. ಆರೋಪ ಹೊತ್ತು ಹಲ್ಲೆಗೊಳದವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದರೆ ಪೊಲೀಸಪ್ಪ ಕ್ಯಾರೆ ಅಂತಿಲ್ಲ. ಬದಲಾಗಿ ಆರೋಪಿಗಳನ್ನು ಸ್ಟೇಷನ್​'ಗೆ ಕರೆಸಿಕೊಂಡು ರಾಜಮಾರ್ಯದೆ ಕೋಟ್ಟು ಕಳುಹಿಸಿದ್ದಾರೆ. ಆ ಪೊಲೀಸಪ್ಪ ನಾದರೂ ಯಾರು ಅಂತಿರಾ? ಈ ಸ್ಟೋರಿ ನೋಡಿ.

ಬೆಂಗಳೂರು(ಮೇ.24): ಕೊಟ್ಟ ಸಾಲ ಕೋಡುವುದು ತಡವಾಗಿದ್ದೇಕೆ ಆತನ ಮೇಲೆ ಆ ಗ್ಯಾಂಗ್​​ ಮಾರಣಾಂತಿಕ ಹಲ್ಲೆ ನಡೆಸಿದೆ. ಆರೋಪ ಹೊತ್ತು ಹಲ್ಲೆಗೊಳದವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದರೆ ಪೊಲೀಸಪ್ಪ ಕ್ಯಾರೆ ಅಂತಿಲ್ಲ. ಬದಲಾಗಿ ಆರೋಪಿಗಳನ್ನು ಸ್ಟೇಷನ್​'ಗೆ ಕರೆಸಿಕೊಂಡು ರಾಜಮಾರ್ಯದೆ ಕೋಟ್ಟು ಕಳುಹಿಸಿದ್ದಾರೆ. ಆ ಪೊಲೀಸಪ್ಪ ನಾದರೂ ಯಾರು ಅಂತಿರಾ? ಈ ಸ್ಟೋರಿ ನೋಡಿ.

ಜೆ.ಪಿ.ನಗರ ಸ್ಟೇಷನ್ ಲಿಮಿಟ್ ನಿವಾಸಿ ಬಾಬು, ತಮ್ಮದೇ ಏರಿಯಾದ ಫೈನಾನ್ಸಿಯರ್​​ ಕಿಶೋರ್​​ ಬಳಿ 6 ಲಕ್ಷದ 50 ಸಾವಿರ ರೂಪಾಯಿ ಸಾಲ ಪಡೆದಿದ್ದಾನೆ. ಸಾಲ ಹಿಂತಿರುಗಿಸಲು ತಡವಾಗಿದ್ದಕ್ಕೆ  ಮೀಟರ್​​ ಬಡ್ಡಿ ಸೇರಿಸಿ 13 ಲಕ್ಷ  ಕೊಡುವಂತೆ ಕಿಶೋರ್ ಒತ್ತಡ ಹಾಕಿದ್ದಾನೆ. ಆದ್ರೆ, ಬಾಬು 4 ಲಕ್ಷದ 40 ಸಾವ್ರ ರೂಪಾಯಿ ಹಿಂತಿರುಗಿಸಿದ್ದಾನೆ. ಉಳಿದ ಹಣ ಹಿಂತಿರುಗಿಸಲು ಸ್ವಲ್ಪ ಸಮಯ ಕೇಳಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ​​ಕಿಶೋರ್​​, ಮತ್ತವನ ತಂಡ ಬಾಬುವನ್ನು ಕಿಡ್ನಾಪ್​ ಮಾಡಿ ರೂಮೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಬಾಬು ಜೆ.ಪಿ.ನಗರ ಪೊಲೀಸರಿಗೆ ದೂರು ನೀಡಿದ್ದರೂ ಯಾವ್ದೇ ಪ್ರಯೋಜನ ಆಗಿಲ್ಲ. ಯಾಕೆಂದರೆ ಜೆ.ಪಿ.ನಗರ ಪೊಲೀಸರೆಲ್ಲಾ ಕಿಶೋರ್ ಮತ್ತವನ ತಂಡದ ಆಪ್ತರೇ. ಹೀಗಾಗಿ, ಕಿಶೋರ್​ ಮತ್ತು ಸಹಚರರ ವಿರುದ್ಧ FIR ದಾಖಲಿಸಿಲ್ಲ. ಇದಾದ ಬಳಿಕ ಮೇಲೆ ತನ್ನ ಸ್ನೇಹಿತನ ಮೂಲಕ ಬಾಬುಗೆ ಕಾಲ್ ಮಾಡಿಸಿ ಕಿಶೋರ್ ಕೊಲೆ ಬೆದರಿಕೆ ಹಾಕಿದ್ದಾನೆ.

ಒಟ್ಟಿನಲ್ಲಿ  ಅನ್ಯಾಯ ಮಾಡಿದವರ ವಿರುದ್ಧ ಜೆ.ಪಿ. ನಗರ ಇನ್ಸ್​ಪೆಕ್ಟರ್​​ ಸಂಜೀವ್​​ ಕುಮಾರ್​ ಮಹಾಜನ್​​ ಯಾವುದೇ ದೂರು ದಾಖಲಿಸಿಕೊಳ್ಳದಿರುವುದು ಅನುಮಾನ ಮೂಡಿಸಿದೆ. ಇವಾಗ ಬೆಂಗಳೂರು ಕಮಿಷನರ್​​ ಪ್ರವೀಣ್ ಸೂದ್​ ಮೀಟರ್ ಬಡ್ಡಿಕೋ ಕಿಶೋರ್​​ ಮೇಲೆ  ಯಾವ ರೀತಿಯ ಕ್ರಮ ಕೈಗೊಳ್ತಾರೆ ಎನ್ನುವುದೇ ಕುತೂಹಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಟ್ಟೆಪಾಡಿಗಾಗಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಗುಲಾಬಿ ಹೂ ಮಾರುತ್ತಿದ್ದ 11 ವರ್ಷದ ಬಾಲಕಿಯ ಅಪಹರಿಸಿ ಅತ್ಯಾ*ಚಾರ
'ಹೌದು ಆರ್‌ಸಿಬಿ ಟೀಮ್‌ ಖರೀದಿಗೆ ದೊಡ್ಡ ಮೊತ್ತದ ಬಿಡ್‌ ಮಾಡಿದ್ದೇನೆ..' ಖಚಿತಪಡಿಸಿದ ಬಿಲಿಯನೇರ್‌!