ಅಖಿಲೇಶ್ ದುರಹಂಕಾರಕ್ಕೆ ಜನತೆಯಿಂದ ತಕ್ಕ ಶಾಸ್ತಿ: ಶಿವಪಾಲ್ ಯಾದವ್

By Suvarna Web DeskFirst Published Mar 11, 2017, 1:30 AM IST
Highlights

ಸಮಾಜವಾದಿ ಪಕ್ಷದ ಸೋಲಿಗೆ ಅಖಿಲೇಶ್ ಯಾದವ್’ರ ಅಹಂಕಾರವೇ ಕಾರಣ. ಮುಲಾಯಂ ಸಿಂಗ್ ಹಾಗೂ ನನಗೆ ಅವಮಾನ ಮಾಡಿರುವುದಕ್ಕೆ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ, ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ.

ಲಕ್ನೋ (ಮಾ.11): ಉತ್ತರಪ್ರದೇಶ ಚುನಾವಣಾ ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಯಾದವ್, ಅಖಿಲೇಶ್ ಅಹಂಕಾರಕ್ಕೆ ಜನತೆ ಕಲಿಸಿರುವ ಪಾಠವೆಂದು ಬಣ್ಣಿಸಿದ್ದಾರೆ.

ಸಮಾಜವಾದಿ ಪಕ್ಷದ ಸೋಲಿಗೆ ಅಖಿಲೇಶ್ ಯಾದವ್’ರ ಅಹಂಕಾರವೇ ಕಾರಣ. ಮುಲಾಯಂ ಸಿಂಗ್ ಹಾಗೂ ನನಗೆ ಅವಮಾನ ಮಾಡಿರುವುದಕ್ಕೆ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ, ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಸಹೋದರ ಶಿವಪಾಲ್ ಯಾದವ್ ಅವರನ್ನು ಕಡೆಗಣಿಸಿ ಅಖಿಲೇಶ್ ಸಮಾಜವಾದಿ ಪಕ್ಷದ ಚುಕ್ಕಾಣಿ ಹಿಡಿದಿದ್ದರು.

click me!