ಶಬರಿಮಲೆ ಅಯ್ಯಪ್ಪ ಸನ್ನಿಧಿ ಪ್ರಸಾದಕ್ಕಿನ್ನು ಪೇಟೆಂಟ್‌!

Published : Sep 24, 2019, 09:52 AM IST
ಶಬರಿಮಲೆ ಅಯ್ಯಪ್ಪ ಸನ್ನಿಧಿ ಪ್ರಸಾದಕ್ಕಿನ್ನು ಪೇಟೆಂಟ್‌!

ಸಾರಾಂಶ

ಶಬರಿಮಲೆಯ ಅಯ್ಯಪ್ಪ ಸನ್ನಿಧಿಯ ಪ್ರಸಾದಕ್ಕೆ ತಿರುವಾಂಕೂರ್‌ ದೇವಸ್ಥಾನ ಮಂಡಳಿ ಪ್ರಸಾದಗಳ ಪೇಟೆಂಟ್‌ ಪಡೆಯಲು ಮುಂದಾಗಿದೆ.  ‘ಶಬರಿಮಲ ಅರವಣ’ ಸೇರಿದಂತೆ ಅಂಬಲಪುಳ ಪಾಲ್‌ಪಾಯಸಂ, ಕೊಟ್ಟರಕ್ಕರ ಉನ್ನಿಯಪ್ಪಂ ಹಾಗೂ ಇನ್ನಿತರ ಪ್ರಸಾದಗಳ ನಕಲು ತಡೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತಿರುವನಂತಪುರ(ಸೆ. 24): ದಕ್ಷಿಣದ ಪ್ರಸಿದ್ಧ ದೇವಾಲಯ ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿಧಿಯ ‘ಶಬರಿಮಲ ಅರವಣ’ ಸೇರಿದಂತೆ ಇನ್ನಿತರ ಪ್ರಸಾದಗಳ ನಕಲು ತಡೆಗಾಗಿ ತಿರುವಾಂಕೂರ್‌ ದೇವಸ್ಥಾನ ಮಂಡಳಿ ಪ್ರಸಾದಗಳ ಪೇಟೆಂಟ್‌ ಪಡೆಯಲು ಮುಂದಾಗಿದೆ.

ಶಬರಿಮಲೆಯ ಅರವಣ, ಪಾಲ್‌ಪಾಯಸಂ, ಉನ್ನಿಯಪ್ಪಂ ಸೇರಿ ಇತರ ಪ್ರಸಾದ ಅತ್ಯಂತ ಸ್ವಾದವುಳ್ಳ ಪ್ರಸಾದವಾಗಿದ್ದು, ಇದರ ನಕಲನ್ನು ತಡೆಯಲು ದೇವಸ್ಥಾನ ಮಂಡಳಿ ಇಂತಹದೊಂದು ನಿರ್ಧಾರಕ್ಕೆ ಬಂದಿದೆ.

ದರ್ಪಣ ತೀರ್ಥದಲ್ಲಿ ಪ್ರವಾಹ: ಕುಕ್ಕೆ ಸುಬ್ರಮಣ್ಯ ದೇವಳದೊಳಗೆ ನೀರು

ದೇವಸ್ಥಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸನ್ನಿಧಿಯಲ್ಲಿ ವಿತರಿಸಲಾಗುವ ಅಂಬಲಪುಳ ಪಾಲ್‌ಪಾಯಸಂ, ಕೊಟ್ಟರಕ್ಕರ ಉನ್ನಿಯಪ್ಪಂ ಹಾಗೂ ಅರವಣದಂತಹ ಪ್ರಸಾದಗಳಿಗೆ ಮೊದಲ ಬಾರಿಗೆ ಪೇಟೆಂಟ್‌ ಪಡೆಯಲು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ವಹಿಸುವ ತಿರುವಾಂಕೂರ್‌ ದೇವಸ್ಥಾನ ಮಂಡಳಿ ನಿರ್ಧರಿಸಿದೆ. ಇದರಿಂದ ಇತರರು ಇದೇ ಹೆಸರಿನಲ್ಲಿ ಇತರೆ ಪ್ರಸಾದಗಳನ್ನು ಮಾರಾಟ ಮಾಡುವ ಕ್ರಮಕ್ಕೆ ನಿಷೇಧ ಬೀಳಲಿದೆ.

ಸೆ.26, 27 ಕ್ಕೆ ಬ್ಯಾಂಕ್ ನೌಕರರ ಮುಷ್ಕರವಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು