ಟೆಲಿಕಾಂ ಕ್ಷೇತ್ರಕ್ಕೆ ಪತಂಜಲಿ?: ಸಮೃದ್ಧಿ ಸಿಮ್ ಮರ್ಮವೇನು?

Published : May 29, 2018, 07:33 PM IST
ಟೆಲಿಕಾಂ ಕ್ಷೇತ್ರಕ್ಕೆ ಪತಂಜಲಿ?: ಸಮೃದ್ಧಿ ಸಿಮ್ ಮರ್ಮವೇನು?

ಸಾರಾಂಶ

ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ, ತನ್ನ ಕಂಪನಿ ನೌಕರರಿಗೆ ಸಮೃದ್ಧಿ ಸಿಮ್ ಪರಿಚಯಿಸಿದೆ.

ನವದೆಹಲಿ[ಮೇ 29]: ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ, ತನ್ನ ಕಂಪನಿ ನೌಕರರಿಗೆ ಸಮೃದ್ಧಿ ಸಿಮ್ ಪರಿಚಯಿಸಿದೆ.

ಆದರೆ ಈ ಸಮೃದ್ಧಿ ಸಿಮ್ ಕೇವಲ ಪತಂಜಲಿ ಕಂಪನಿಯ ನೌಕರರಿಗೆ ಮಾತ್ರ ಲಭ್ಯವಿದ್ದು,  ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ ಹೊಂದಿರುವರಿಗೆ ಪತಂಜಲಿ ಉತ್ಪನ್ನಗಳಲ್ಲಿ ಶೇ.10 ರಿಯಾಯಿತಿ ಸಿಗಲಿದೆ. ಸಾರ್ವಜನಿಕರಿಗೂ ಸಮೃದ್ಧಿ ಸಿಮ್ ಸಿಗಲಿದೆ ಎಂದು ಈ ಮೊದಲು ಹೇಳಲಾಗಿತ್ತಾದರೂ, ಇದೀಗ ಕೇವಲ ಕಂಪನಿ ನೌಕರರಿಗೆ ಮಾತ್ರ ಸೀಮಿತ ಎಂದು ಸ್ಪಷ್ಟಪಡಿಸಲಾಗಿದೆ.

ರೂ. 144ಗೆ 2ಜಿಬಿ ಡೇಟಾ 100 ಎಸ್‌ಎಂಎಸ್‌ಗಳು ಮತ್ತು ರಾಷ್ಟ್ರದಾದ್ಯಂತ ಅನಿಯಮಿತ ಕರೆಗಳನ್ನು ಮಾಡುವ ಆಫರ್‍ ನೀಡಲಾಗಿದೆ .ಇದಲ್ಲದೆ ಸಿಮ್‌ ಕಾರ್ಡ್‌ ಜತೆ ಅಫಘಾತ ವಿಮೆ, ₹2.5 ಲಕ್ಷ . ವರೆಗೆ ವೈದ್ಯಕೀಯ ಆರೋಗ್ಯ ವಿಮೆ ಹಾಗೂ 5 ಲಕ್ಷ ರೂ. ವರೆಗೆ ಜೀವ ವಿಮೆಯನ್ನು ಅಳವಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Gold Rate Today: ಚಿನ್ನದ ದರ ಒಂದೇ ತಿಂಗಳಲ್ಲಿ ₹50,000. ಇಳಿಕೆ! ಯುದ್ಧದ ವೇಳೆ ₹1.92 ಲಕ್ಷ ಇದ್ದ ಬೆಲೆ, ಇಂದು ಎಷ್ಟಿದೆ ನೋಡಿ
India Rainfall Deficit: ಜೂನ್‌ನಲ್ಲಿ ಕೇವಲ 99 ಮಿ.ಮೀ ಮಳೆ: ಇದು 126 ವರ್ಷಗಳಲ್ಲೇ 5ನೇ ಅತಿ ಕನಿಷ್ಠ! ಜುಲೈನಲ್ಲೂ ಆತಂಕ!