ಸಂಸತ್ತಿನಲ್ಲಿ ಜಯಾಗೆ ಶ್ರದ್ಧಾಂಜಲಿ; ಕಲಾಪಗಳು ಮುಂದೂಡಿಕೆ

By Suvarna Web DeskFirst Published Dec 6, 2016, 6:57 AM IST
Highlights

ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ನಾಳೆಗೆ ಮುಂದೂಡಲಾಗಿದೆ. ಜಯಾ ನಿಧನದ ಹಿನ್ನೆಲೆಯಲ್ಲಿ ಕೆಂದ್ರ ಸರ್ಕಾರ ಈಗಾಗಲೇ ಒಂದು ದಿನದ ಶೋಕಾಚರಣೆ ಘೋಷಿಸಿ

ನವದೆಹಲಿ (ಡಿ.06): ನಿನ್ನೆ ರಾತ್ರಿ ಕೊನೆಯುಸಿರೆಳೆದ ತಮಿಳುನಾಡು ಮುಖ್ಯಮಂತ್ರಿ ಜಯಾಲಲಿತಾ ಅವರಿಗೆ ಸಂಸತ್ತಿನಲ್ಲಿಂದು ಶ್ರದ್ದಾಂಜಲಿ ಸಲ್ಲಿಸಲಾಯಿತು. ಬಳಿಕ ಇಂದಿನ ಸಂಸತ್ತು ಕಲಾಪಗಳನ್ನು ಮುಂದೂಡಲಾಯಿತು.

ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ನಾಳೆಗೆ ಮುಂದೂಡಲಾಗಿದೆ. ಜಯಾ ನಿಧನದ ಹಿನ್ನೆಲೆಯಲ್ಲಿ ಕೆಂದ್ರ ಸರ್ಕಾರ ಈಗಾಗಲೇ ಒಂದು ದಿನದ ಶೋಕಾಚರಣೆ ಘೋಷಿಸಿದೆ.

ತಮಿಳುನಾಡು ಸರ್ಕಾರ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ  3 ದಿನ ರಜೆ ಘೋಷಿಸಿದೆ ಹಾಗೂ ರಾಜ್ಯದಲ್ಲಿ 7 ದಿನ ಶೋಕಾಚರಣೆ ನಡೆಯಲಿದೆ.

ಕರ್ನಾಟಕ ಸೇರಿದಂತೆ, ಪಕ್ಕದ ಪಾಂಡಿಚೇರಿ, ಕೇರಳ, ಉತ್ತರಾಖಂಡ ಹಾಗೂ ಬಿಹಾರ ರಾಜ್ಯಗಳೂ ಒಂದು ದಿನದ ಶೋಕಾಚರಣೆಯನ್ನು ಆಚರಿಸುತ್ತಿವೆ.

click me!