ಮಕ್ಕಳಿಗೆ ಕಳಪೆ ಆಹಾರ: ಅಂಗನವಾಡಿಗೆ ಪೋಷಕರಿಂದ ಮುತ್ತಿಗೆ

By Suvarna Web DeskFirst Published Aug 18, 2017, 4:38 PM IST
Highlights

ಹುಳು ಹಿಡಿದಿದ್ದ ಗೋಧಿ , ಅಕ್ಕಿ ನುಚ್ಚು, ಹೆಸರುಬೇಳೆಗಳಿಂದ ತಯಾರಿಸಿದ ಕಳಪೆ ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದ ಅಂಗನವಾಡಿಗೆ, ಪೋಷಕರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಿಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.  ಹಾಸನ ಜಿಲ್ಲೆ  ಹೊಳೆನರಸೀಪುರದ ಅಂಬೇಡ್ಕರ್ ನಗರದ ಅಂಗನವಾಡಿಯಲ್ಲಿ ಮಕ್ಕಳಿಗೆ ಈ ರೀತಿಯ ಕಳಪೆ ಆಹಾರ ನೀಡಲಾಗುತ್ತಿತ್ತು. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು.

ಹಾಸನ: ಹುಳು ಹಿಡಿದಿದ್ದ ಗೋಧಿ , ಅಕ್ಕಿ ನುಚ್ಚು, ಹೆಸರುಬೇಳೆಗಳಿಂದ ತಯಾರಿಸಿದ ಕಳಪೆ ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದ ಅಂಗನವಾಡಿಗೆ, ಪೋಷಕರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಿಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.  

ಹಾಸನ ಜಿಲ್ಲೆ  ಹೊಳೆನರಸೀಪುರದ ಅಂಬೇಡ್ಕರ್ ನಗರದ ಅಂಗನವಾಡಿಯಲ್ಲಿ ಮಕ್ಕಳಿಗೆ ಈ ರೀತಿಯ ಕಳಪೆ ಆಹಾರ ನೀಡಲಾಗುತ್ತಿತ್ತು. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು.

ಇದರಿಂದ  ಕುಪಿತರಾದ ಪೋಷಕರು ಅಂಗನವಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹುಳುಮಿಶ್ರಿತ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಸಿಡಿಪಿಓ ಕುಮಾರ್ ಪೋಷಕರನ್ನುಸಮಾಧಾನಪಡಿಸಿ , ಬೇಜವಾಬ್ದಾರಿ ತೋರಿದ ಅಂಗನವಾಡಿ ಸಿಬ್ಬಂದಿ ಮೇಲೆ ಕ್ರಮವಹಿಸುವ ಭರವಸೆ ನೀಡಿದ್ದಾರೆ.

click me!