ಮಕ್ಕಳಿಗೆ ಕಳಪೆ ಆಹಾರ: ಅಂಗನವಾಡಿಗೆ ಪೋಷಕರಿಂದ ಮುತ್ತಿಗೆ

Published : Aug 18, 2017, 04:38 PM ISTUpdated : Apr 11, 2018, 12:45 PM IST
ಮಕ್ಕಳಿಗೆ ಕಳಪೆ ಆಹಾರ: ಅಂಗನವಾಡಿಗೆ ಪೋಷಕರಿಂದ ಮುತ್ತಿಗೆ

ಸಾರಾಂಶ

ಹುಳು ಹಿಡಿದಿದ್ದ ಗೋಧಿ , ಅಕ್ಕಿ ನುಚ್ಚು, ಹೆಸರುಬೇಳೆಗಳಿಂದ ತಯಾರಿಸಿದ ಕಳಪೆ ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದ ಅಂಗನವಾಡಿಗೆ, ಪೋಷಕರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಿಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.  ಹಾಸನ ಜಿಲ್ಲೆ  ಹೊಳೆನರಸೀಪುರದ ಅಂಬೇಡ್ಕರ್ ನಗರದ ಅಂಗನವಾಡಿಯಲ್ಲಿ ಮಕ್ಕಳಿಗೆ ಈ ರೀತಿಯ ಕಳಪೆ ಆಹಾರ ನೀಡಲಾಗುತ್ತಿತ್ತು. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು.

ಹಾಸನ: ಹುಳು ಹಿಡಿದಿದ್ದ ಗೋಧಿ , ಅಕ್ಕಿ ನುಚ್ಚು, ಹೆಸರುಬೇಳೆಗಳಿಂದ ತಯಾರಿಸಿದ ಕಳಪೆ ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದ ಅಂಗನವಾಡಿಗೆ, ಪೋಷಕರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಿಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.  

ಹಾಸನ ಜಿಲ್ಲೆ  ಹೊಳೆನರಸೀಪುರದ ಅಂಬೇಡ್ಕರ್ ನಗರದ ಅಂಗನವಾಡಿಯಲ್ಲಿ ಮಕ್ಕಳಿಗೆ ಈ ರೀತಿಯ ಕಳಪೆ ಆಹಾರ ನೀಡಲಾಗುತ್ತಿತ್ತು. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು.

ಇದರಿಂದ  ಕುಪಿತರಾದ ಪೋಷಕರು ಅಂಗನವಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹುಳುಮಿಶ್ರಿತ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಸಿಡಿಪಿಓ ಕುಮಾರ್ ಪೋಷಕರನ್ನುಸಮಾಧಾನಪಡಿಸಿ , ಬೇಜವಾಬ್ದಾರಿ ತೋರಿದ ಅಂಗನವಾಡಿ ಸಿಬ್ಬಂದಿ ಮೇಲೆ ಕ್ರಮವಹಿಸುವ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

1971ರ ಯುದ್ಧದಲ್ಲಿ ಭಾರತ ಮುಳುಗಿಸಿದ್ದ ಪಿಎನ್‌ಎಸ್‌ ಘಾಜಿ ಸಬ್‌ಮರೀನ್‌ ನೌಕೆ ಪುನಃ ಪಡೆದ ಪಾಕಿಸ್ತಾನ
ರಾಮನಗರದಲ್ಲಿದೆ ವಾರಸುದಾರರಿಲ್ಲದ 48.69 ಕೋಟಿ ರು! ಹಣ ವಾಪಸ್ ಹಿಂದಿರುಗಿಸಲು ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನ