
ಬೆಂಗಳೂರು(ಸೆ.02): ನೂತನ ಗೃಹ ಸಚಿವರಿಗೆ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕೆಂಪಯ್ಯ ಬಗ್ಗೆ ಬೀ ಅಲರ್ಟ್ ಅನ್ನೋ ಸಲಹೆ ಸಿಕ್ಕಿದೆ. ಇಂತಹ ಸಲಹೇ ನೀಡಿದ್ದು ಬೇರಾರೂ ಅಲ್ಲ ನಿಕಟಪೂರ್ವ ಗೃಹ ಸಚಿವ ಜಿ ಪರಮೇಶ್ವರ್.ಇದೇ ವೇಳೆ,ಸಿದ್ದರಾಮಯ್ಯ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಕೆಲ ಅಸೈನ್ಮೆಂಟ್ಗಳನ್ನ ನೀಡಿದ್ದಾರೆ.
ನೂತನ ಗೃಹ ಸಚಿವರಾಗಿ ರಾಮಲಿಂಗಾರೆಡ್ಡಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಲಹೆಗಳ ಸುರಿಮಳೆಯಾಗಿದೆ. ಗೃಹ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಕೂಡಲೇ ರಾಮಲಿಂಗಾರೆಡ್ಡಿ ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ರನ್ನು ಭೇಟಿ ಮಾಡಿದರು.
ಈ ವೇಳೆ ಕೆಲ ಸಲಹೆಗಳನ್ನು ನೀಡಿದ ಪರಮೇಶ್ವರ್ ಅವರು ಕೆಂಪಯ್ಯರಿಂದ ಹುಷಾರಾಗಿರಿ. ಕೆಂಪಯ್ಯರನ್ನ ಆದಷ್ಟು ಅವೈಡ್ ಮಾಡಿ. ಸಿದ್ದರಾಮಯ್ಯ ಅವರು ಕೆಂಪಯ್ಯರನ್ನ ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ. ಇಲಾಖೆಯನ್ನು ಬಹಳ ನಾಜೂಕಾಗಿ ಕಾರ್ಯ ನಿರ್ವಹಿಸಿ. ಆದಷ್ಟು ಇಲಾಖೆಯನ್ನು ಸ್ವತಂತ್ರವಾಗಿ ನಿಭಾಯಿಸಲು ಪ್ರಯತ್ನ ಪಡಿ' ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.