ಶಶಿಕಲಾ ಹಾಗೂ ಪನ್ನೀರ್ ನಡುವೆ ಅಧಿಕಾರದ ಜೊತೆ 224 ಕೋಟಿ ಆಸ್ತಿಗೂ ಕಿತ್ತಾಟ

Published : Feb 12, 2017, 04:45 PM ISTUpdated : Apr 11, 2018, 01:04 PM IST
ಶಶಿಕಲಾ ಹಾಗೂ ಪನ್ನೀರ್ ನಡುವೆ ಅಧಿಕಾರದ ಜೊತೆ  224 ಕೋಟಿ ಆಸ್ತಿಗೂ ಕಿತ್ತಾಟ

ಸಾರಾಂಶ

ತಮ್ಮದೇ ನೈಜ ಎಐಎಡಿಎಂಕೆ ಪಕ್ಷ ಎಂದು ಹೇಳಿಕೊಂಡಿರುವ ಮಧುಸೂದನ್, ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಶಶಿಕಲಾ ಅವರಿಗೆ ಯಾವ ಅಕಾರವಿದೆ ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಯಾರಾಗಬೇಕು ಎಂದು ನಿರ್ಧರಿಸುವುದು ನಮ್ಮ ಅಧಿಕಾರವಾಗಿದೆ. ಹೊಸ ಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಶೀಘ್ರವೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಚೆನ್ನೈ(ಫೆ.12): ಎಐಎಡಿಎಂಕೆ ಪಕ್ಷದಲ್ಲಿ ಒಂದೆಡೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮತ್ತು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮಧ್ಯೆ ಅಕಾರಕ್ಕೆ ಕಿತ್ತಾಟ ನಡೆಯುತ್ತಿರುವಾಗಲೇ, ಈಗ ಆಸ್ತಿಪಾಸ್ತಿಗಳ ಮೇಲಿನ ಹಕ್ಕು ಯಾರಿಗೆ ಸೇರಿದ್ದು ಎಂಬ ಕುರಿತಾಗಿ ವಿವಾದ ಸೃಷ್ಟಿಯಾಗಿದೆ. ಪನ್ನೀರ್ ಬಣದಲ್ಲಿರುವ ಎಐಎಡಿಎಂಕೆ ಸ್ಥಾಯಿ ಸಮಿತಿ ಮುಖ್ಯಸ್ಥ ಎ ಮಧುಸೂಧನನ್ ಮತ್ತು ಶಶಿಕಲಾ ಬಣದಲ್ಲಿರುವ ಎಐಎಡಿಎಂಕೆ ಕಾನೂನು ಘಟಕದ ಮುಖ್ಯಸ್ಥ ದುರೈ ಪಂಡಿಯನ್ ಅವರು ಪಕ್ಷದ ಆಸ್ತಿಯನ್ನು ರಕ್ಷಿಸಲು ಚುನಾವಣಾ ಆಯೋಗದ ಮೊರೆ ಹೋಗುವುದಾಗಿ ಹೇಳಿದ್ದಾರೆ.

ತಮ್ಮದೇ ನೈಜ ಎಐಎಡಿಎಂಕೆ ಪಕ್ಷ ಎಂದು ಹೇಳಿಕೊಂಡಿರುವ ಮಧುಸೂದನ್, ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಶಶಿಕಲಾ ಅವರಿಗೆ ಯಾವ ಅಕಾರವಿದೆ ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಯಾರಾಗಬೇಕು ಎಂದು ನಿರ್ಧರಿಸುವುದು ನಮ್ಮ ಅಧಿಕಾರವಾಗಿದೆ. ಹೊಸ ಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಶೀಘ್ರವೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಎಐಎಡಿಎಂಕೆಯ ಆಸ್ತಿ 224 ಕೋಟಿ ರು. ಇದೆ. ತಮ್ಮ ಅನುಮತಿ ಇಲ್ಲದೇ ಬ್ಯಾಂಕ್ ಖಾತೆಯನ್ನು ಬಳಕೆ ಮಾಡದಂತೆ ಪನ್ನೀರ್ ಸೆಲ್ವಂ ಅವರು ಬ್ಯಾಂಕುಗಳಿಗೆ ಸೂಚಿಸಿದ್ದಾರೆ. ಪಕ್ಷ ಮತ್ತು ಪಕ್ಷದ ಆಸ್ತಿಪಾಸ್ತಿಯ ರಕ್ಷಣೆಗಾಗಿ ನಾವು ಕಾನೂನೂ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮಧುಸೂಧನನ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ