ಗೋರಖ್'ಪುರದಲ್ಲಿ ಮತ್ತೆ ಸಾವಿನ ರುದ್ರನರ್ತನ; 3 ದಿನದಲ್ಲಿ 61 ಮಕ್ಕಳು ಸಾವು

By Suvarna Web DeskFirst Published Aug 30, 2017, 4:10 PM IST
Highlights

ಮೂರು ವಾರಗಳ ಹಿಂದೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯ ಕೊರತೆಯಿಂದ ಸುಮಾರು 70 ಮಕ್ಕಳು ಸಾವನಪ್ಪಿದ ಘಟನೆ ಇನ್ನೂ ಹಸಿಯಿರುವಾಗಲೇ, ಉತ್ತರ ಪ್ರದೇಶ ಗೋರಖ್'ಪುರದ ಬಿಆರ್'ಡಿ ಆಸ್ಪತ್ರೆಯಲ್ಲಿ ಸಾವಿನ ರುದ್ರ ನರ್ತನ ಮುಂದುವರೆದಿದೆ.

ಗೋರಖ್'ಪುರ, ಉತ್ತರ ಪ್ರದೇಶ: ಮೂರು ವಾರಗಳ ಹಿಂದೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯ ಕೊರತೆಯಿಂದ ಸುಮಾರು 70 ಮಕ್ಕಳು ಸಾವನಪ್ಪಿದ ಘಟನೆ ಇನ್ನೂ ಹಸಿಯಿರುವಾಗಲೇ, ಉತ್ತರ ಪ್ರದೇಶ ಗೋರಖ್'ಪುರದ ಬಿಆರ್'ಡಿ ಆಸ್ಪತ್ರೆಯಲ್ಲಿ ಸಾವಿನ ರುದ್ರ ನರ್ತನ ಮುಂದುವರೆದಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರವಾಗಿರುವ ಗೋರಖ್'ಪುರದ ಈ ಬಿಆರ್'ಡಿ ಆಸ್ಪತ್ರೆಯಲ್ಲಿ  ಕಳೆದ 72 ಗಂಟೆಗಳಲ್ಲಿ 61 ಮಕ್ಕಳು ಮೃತಪಟ್ಟಿದ್ದಾರೆಂದು ವರದಿಯಾಗಿದೆ.

Latest Videos

ಈ ಬಾರಿ ಮಕ್ಕಳ ಸಾವಿಗೆ ಕಾರಣ ಬೇರೆಯಾಗಿದೆ. ಎನ್ಸಿಪಾಲಿಟಿ, ನಿಮೋನಿಯಾ, ಸೆಪ್ಸಿಸ್ ಹೀಗೆ ವಿವಿಧ ಬಗೆಯ ಕಾಯಿಲೆಗಳಿಂದ ಮಕ್ಕಳು ಸಾವನಪ್ಪಿದ್ದಾರೆಂದು ಹೇಳಲಾಗಿದೆ.

ಇನ್ನೊಂದು ವರದಿಯ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಮಕ್ಕಳ ಸಾವಿನ ಸಂಖ್ಯೆ 290ಕ್ಕೆ ತಲುಪಿದೆ.  ಅವುಗಳಲ್ಲಿ 213 ಮಕ್ಕಳು ನಿಯೋ-ನೇಟಲ್ ಐಸಿಯುನಲ್ಲಿ ಮೃತಪಟ್ಟಿದ್ದರೆ, 77 ಮಕ್ಕಳು ಎನ್ಸಿಪಾಲಿಟಿ ವಿಭಾಗದಲ್ಲಿ ಮೃತಪಟ್ಟಿದ್ದಾರೆಂದು ಬಿಆರ್'ಡಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪಿ.ಕೆ.ಸಿಂಗ್ ಹೇಳಿದ್ದಾರೆ.

ಈ ವರ್ಷದಲ್ಲಿ ಒಟ್ಟು 1250 ಮಕ್ಕಳು ಈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಪಿಟಿಐ ವರದಿ ಮಾಡಿದೆ.

(ಸಾಂದರ್ಭಿಕ ಚಿತ್ರ)

click me!