ಗೋರಖ್'ಪುರದಲ್ಲಿ ಮತ್ತೆ ಸಾವಿನ ರುದ್ರನರ್ತನ; 3 ದಿನದಲ್ಲಿ 61 ಮಕ್ಕಳು ಸಾವು

Published : Aug 30, 2017, 04:10 PM ISTUpdated : Apr 11, 2018, 12:43 PM IST
ಗೋರಖ್'ಪುರದಲ್ಲಿ ಮತ್ತೆ ಸಾವಿನ ರುದ್ರನರ್ತನ; 3 ದಿನದಲ್ಲಿ 61 ಮಕ್ಕಳು ಸಾವು

ಸಾರಾಂಶ

ಮೂರು ವಾರಗಳ ಹಿಂದೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯ ಕೊರತೆಯಿಂದ ಸುಮಾರು 70 ಮಕ್ಕಳು ಸಾವನಪ್ಪಿದ ಘಟನೆ ಇನ್ನೂ ಹಸಿಯಿರುವಾಗಲೇ, ಉತ್ತರ ಪ್ರದೇಶ ಗೋರಖ್'ಪುರದ ಬಿಆರ್'ಡಿ ಆಸ್ಪತ್ರೆಯಲ್ಲಿ ಸಾವಿನ ರುದ್ರ ನರ್ತನ ಮುಂದುವರೆದಿದೆ.

ಗೋರಖ್'ಪುರ, ಉತ್ತರ ಪ್ರದೇಶ: ಮೂರು ವಾರಗಳ ಹಿಂದೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯ ಕೊರತೆಯಿಂದ ಸುಮಾರು 70 ಮಕ್ಕಳು ಸಾವನಪ್ಪಿದ ಘಟನೆ ಇನ್ನೂ ಹಸಿಯಿರುವಾಗಲೇ, ಉತ್ತರ ಪ್ರದೇಶ ಗೋರಖ್'ಪುರದ ಬಿಆರ್'ಡಿ ಆಸ್ಪತ್ರೆಯಲ್ಲಿ ಸಾವಿನ ರುದ್ರ ನರ್ತನ ಮುಂದುವರೆದಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರವಾಗಿರುವ ಗೋರಖ್'ಪುರದ ಈ ಬಿಆರ್'ಡಿ ಆಸ್ಪತ್ರೆಯಲ್ಲಿ  ಕಳೆದ 72 ಗಂಟೆಗಳಲ್ಲಿ 61 ಮಕ್ಕಳು ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಈ ಬಾರಿ ಮಕ್ಕಳ ಸಾವಿಗೆ ಕಾರಣ ಬೇರೆಯಾಗಿದೆ. ಎನ್ಸಿಪಾಲಿಟಿ, ನಿಮೋನಿಯಾ, ಸೆಪ್ಸಿಸ್ ಹೀಗೆ ವಿವಿಧ ಬಗೆಯ ಕಾಯಿಲೆಗಳಿಂದ ಮಕ್ಕಳು ಸಾವನಪ್ಪಿದ್ದಾರೆಂದು ಹೇಳಲಾಗಿದೆ.

ಇನ್ನೊಂದು ವರದಿಯ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಮಕ್ಕಳ ಸಾವಿನ ಸಂಖ್ಯೆ 290ಕ್ಕೆ ತಲುಪಿದೆ.  ಅವುಗಳಲ್ಲಿ 213 ಮಕ್ಕಳು ನಿಯೋ-ನೇಟಲ್ ಐಸಿಯುನಲ್ಲಿ ಮೃತಪಟ್ಟಿದ್ದರೆ, 77 ಮಕ್ಕಳು ಎನ್ಸಿಪಾಲಿಟಿ ವಿಭಾಗದಲ್ಲಿ ಮೃತಪಟ್ಟಿದ್ದಾರೆಂದು ಬಿಆರ್'ಡಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪಿ.ಕೆ.ಸಿಂಗ್ ಹೇಳಿದ್ದಾರೆ.

ಈ ವರ್ಷದಲ್ಲಿ ಒಟ್ಟು 1250 ಮಕ್ಕಳು ಈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಪಿಟಿಐ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?