ಬಾರಾಮುಲ್ಲಾದಲ್ಲಿ ಉಗ್ರವಾದಕ್ಕೆ ಪ್ರೇರೆಪಿಸುತ್ತಿದ್ದ ಪಾಕ್ ಉಗ್ರ ಸೆರೆ!

Published : Apr 24, 2019, 08:02 PM IST
ಬಾರಾಮುಲ್ಲಾದಲ್ಲಿ ಉಗ್ರವಾದಕ್ಕೆ ಪ್ರೇರೆಪಿಸುತ್ತಿದ್ದ ಪಾಕ್ ಉಗ್ರ ಸೆರೆ!

ಸಾರಾಂಶ

ಉಗ್ರವಾದಕ್ಕೆ ಪ್ರೇರೆಪಿಸುತ್ತಿದ್ದ ಪಾಕ್ ಉಗ್ರ ಸೆರೆ| ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೆರೆಯಾದ ಪಾಕ್ ಉಗ್ರ| ಪಾಕ್ ಮೂಲಕ ಮೊಹ್ಮದ್ ವಾಕರ್ ಬಂಧಿತ ಉಗ್ರ|

ಬಾರಾಮುಲ್ಲಾ(ಏ.24): ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರವಾದಕ್ಕೆ ಪ್ರೇರಣೆ ನೀಡುತ್ತಿದ್ದ ಪಾಕ್ ಮೂಲದ ಎಲ್ ಇಟಿ ಉಗ್ರನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕ್ ಮೂಲಕ ಮೊಹ್ಮದ್ ವಾಕರ್ ಎಂಬ ಉಗ್ರ, ಜಿಲ್ಲೆಯ ಯುವಕರನ್ನು ಸಂಘಟನೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದ. ಆದರೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ವಾಕರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಶ್ಮೀರದಲ್ಲಿ ಮುಸ್ಲಿಮರ ಸ್ಥಿತಿ ಶೋಚನೀಯವಾಗಿದ್ದು ಅವರಿಗೆ ನಮಾಜ್ ಮಾಡಲೂ ಅವಕಾಶ ನೀಡಲಾಗುತ್ತಿಲ್ಲ ಎಂದು ಸುಳ್ಳು ಹೇಳಿ ವಾಕರ್ ನನ್ನು ಎಲ್ ಇಟಿ ಸಂಘಟನೆಗೆ ಸೇರಿಸಿಕೊಂಡಿತ್ತು ಎನ್ನಲಾಗಿದೆ.

ಕಳೆದ ಜನೆವರಿಯಲ್ಲಿ ಬಾರಾಮುಲ್ಲಾ ಜಿಲ್ಲೆ ಕಣಿವೆ ರಾಜ್ಯದ ಮೊದಲ ಭಯೋತ್ಪಾದನೆ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಗೆ ಪಾತ್ರವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಿಪಂ ಸದಸ್ಯ ಯೋಗೇಶ್‌ ಗೌಡ ಹತ್ಯೆ ಕೇಸ್‌: ವಿನಯ್‌ ಕುಲಕರ್ಣಿಗೆ ಬೇಲ್‌ ಅಗತ್ಯವೇ ಇಲ್ಲ: ಸಿಬಿಐ ವಾದ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು