
ಇಸ್ಲಾಮಾಬಾದ್[ನ.19] ಇದು ಪಾಕಿಸ್ತಾನದ ಪ್ರಾಮಾಣಿಕನೊಬ್ಬನ ಕತೆ. ಕಳೆದ ವರ್ಷ ದೆಹಲಿಯ ಕ್ಯಾಬ್ ಚಾಲಕನೊಬ್ಬ 8 ಲಕ್ಷದ ಮೌಲ್ಯದ ವಸ್ತುಗಳನ್ನು ತನ್ನ ವಾಹನದಲ್ಲಿ ಬಿಟ್ಟು ಹೋಗಿದ್ದನ್ನು ಹಿಂದಿರುಗಿಸಿದ್ದ. ಈ ಬಾರಿ ಪಾಕಿಸ್ತಾನದ ಪ್ರಾಮಾಣಿಕ ಕಾರ್ಮಿಕನ ಉದಾಹರಣೆ.
ಟ್ವಿಟರ್ ನಲ್ಲಿ ಪಾಕಿಸ್ತಾನದ ಕಾರ್ಮಿಕನ ಪ್ರಾಮಾಣಿಕತೆ ಕೊಂಡಾಡಲಾಗಿದೆ. ಟ್ವಿಟರ್ ನಲ್ಲಿ ಕ್ರಿಯಾಶೀಲವಾಗಿರುವ ಜೀಶ್ಹಾನ್ ಖಟಕ್ ಕತೆಯನ್ನು ವಿವರವಾಗಿ ಬರೆದಿದ್ದಾರೆ.
ನನ್ನ ಮನೆ ಬಾಗಿಲನ್ನು ಬಡಿದ ಬಡ ಕಾರ್ಮಿಕನೊಬ್ಬ ನೀವು ಯಾವುದಾದರೂ ಆಭರಣವನ್ನು ಕಳೆದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದರು. ಆದರೆ ನಾನು ಇಲ್ಲ ಎಂದು ತಿಳಿಸಿದರ. ಇದಾದ ಮೇಲೆ ಮರುದಿನ ಮತ್ತೆ ಬಾಗಿಲು ಬಡಿದ ಶಬ್ದವಾಯಿತು. ಈ ಬಾರಿ ನನ್ನ ತಮ್ಮ ಬಾಗಿಲು ತೆರೆದ. ಮೂರು ವರ್ಷಗಳ ಹಿಂದೆ ಕಿವಿಯೋಲೆ ಕಳೆದುಕೊಂಡಿದ್ದ ಘಟನೆ ನೆನಪಿಗೆ ಬಂತು. ಇದನ್ನು ತಿಳಿಸಿದಾಗ ಕಾರ್ಮಿಕ ತನ್ನ ಬಳಿಯಿದ್ದ ಕಿವಿಯೋಲೆ ಹಿಂದಕ್ಕೆ ನೀಡಿದ ೆಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಗೆ ಸಾಕಷ್ಟು ನೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ