ಭಾರತ ಬೇಡಿಕೆಗಳಿಗೆ ಮಣಿದ ಪಾಕಿಸ್ತಾನ!

Published : Jul 14, 2019, 09:12 AM IST
ಭಾರತ ಬೇಡಿಕೆಗಳಿಗೆ ಮಣಿದ ಪಾಕಿಸ್ತಾನ!

ಸಾರಾಂಶ

ಭಾರತ ಬೇಡಿಕೆಗಳಿಗೆ ಮಣಿದ ಪಾಕಿಸ್ತಾನ!| ಕರ್ತಾರ್‌ಪುರ ಚರ್ಚೆಗೆ ಮುನ್ನ ಪಾಕ್‌ ಗುರುದ್ವಾರ ಸಮಿತಿಯಿಂದ ಖಲಿಸ್ತಾನ್‌ ನಾಯಕರಿಗೆ ಕೊಕ್‌

ನವದೆಹಲಿ[ಜು.14]: ಭಾನುವಾರ ನಡೆಯಲಿರುವ ಕರ್ತಾರ್‌ಪುರ ಕಾರಿಡಾರ್‌ ಕುರಿತ ಮಾತುಕತೆಗೂ ಮುನ್ನ, ಭಾರತ ಇಟ್ಟಿದ್ದ ಬೇಡಿಕೆಯೊಂದಕ್ಕೆ ಪಾಕಿಸ್ತಾನ ಮಣಿದಿದೆ.

ಪ್ರತ್ಯೇಕ ಸಿಖ್‌ ರಾಜ್ಯಕ್ಕಾಗಿ ಹೋರಾಡುತ್ತಿರುವ ಖಲಿಸ್ತಾನ್‌ ಹೋರಾಟಗಾರರನ್ನು ಪಾಕಿಸ್ತಾನದ ಗುರುದ್ವಾರ ಪ್ರಬಂಧಕ ಸಮಿತಿಯಿಂದ ಕೈಬಿಡಬೇಕೆಂದು ಭಾರತ ಇಟ್ಟಿದ್ದ ಬೇಡಿಕೆಯನ್ನು ಪಾಕ್‌ ಒಪ್ಪಿಕೊಂಡಿದೆ.

ಕರ್ತಾರ್‌ಪುರ ಕಾರಿಡಾರ್‌ಗೆ 100 ಕೋಟಿ ಕೊಟ್ಟ ಪಾಕ್‌!

ಸಮಿತಿಯ ಸದಸ್ಯರಾಗಿದ್ದ, ಖಲಿಸ್ತಾನ್‌ ಹೋರಾಟಗಾರ ಗೋಪಾಲ್‌ಸಿಂಗ್‌ ಚಾವ್ಲಾ ಅವರನ್ನು ಪಾಕ್‌ ಸರ್ಕಾರ ಕೈಬಿಟ್ಟಿದೆ. ಪಾಕಿಸ್ತಾನದಲ್ಲಿರುವ ಸಿಖ್ಖರ ಪರಮೋಚ್ಛ ಗುರು ಬಾಬಾ ಡೇರಾ ನಾನಕ್‌ ಅವರ ಜನ್ಮಸ್ಥಳ ಕರ್ತಾರ್‌ಪುರಕ್ಕೆ ಭಾರತದಲ್ಲಿನ ಸಿಖ್ಖರು ಯಾವುದೇ ಅಡೆತಡೆ ಇಲ್ಲದೇ ಹೋಗಿ ಬರಲು ಕಾರಿಡಾರ್‌ ನಿರ್ಮಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ