
ನವದೆಹಲಿ: ಮುಂಬೈ 26/11 ದಾಳಿ ರೂವಾರಿ ಹಾಗೂ ಜಮಾತುದ್ದಾವ ಸಂಘಟನೆ ಮುಖ್ಯಸ್ಥ ಹಾಫಿಝ ಸಯೀದ್’ನನ್ನು ಪಾಕಿಸ್ತಾನವು ಉಗ್ರನೆಂದು ಘೋಷಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಜಮಾತುದ್ದಾವ ಕಛೇರಿ ಮುಂಭಾಗದಲ್ಲಿ ಕಾರ್ಯಕರ್ತರು ಜೋಡಿಸಿದ್ದ ಬ್ಯಾರಿಕೇಡ್’ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ ಎಂದು ವರದಿಯಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಷೇಧಿಸಿರುವ, ಲಷ್ಕರೆ ತೈಬಾ, ಜಮಾತುದ್ದಾವಾ , ಹರ್ಕತುಲ್ ಮುಜಾಹೀದೀನ್’ಗಳಂಥ ಸಂಘಟನೆಗಳನ್ನು ‘ಭಯೋತ್ಪಾದನೆ-ವಿರೋಧಿ ಕಾಯ್ದೆ-1997’ರ ವ್ಯಾಪ್ತಿಯಲ್ಲಿ ತರುವ ಆಧ್ಯಾದೇಶಕ್ಕೆ ಮಂಗಳವಾರ ಪಾಕಿಸ್ತಾನ ಅಧ್ಯಕ್ಷ ಮಮ್ನೂನ್ ಹುಸೇನ್ ಅಂಕಿತ ಹಾಕಿದ್ದಾರೆ.
ಹೊಸ ಆಧ್ಯಾದೇಶದ ಪ್ರಕಾರ, ಉಗ್ರ ಸಂಘಟನೆಗಳ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಬಹುದಾಗಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿಷೇಧಿಸಲ್ಪಟ್ಟ ಸಂಘಟನೆಗಳ ಪಟ್ಟಿಯಲ್ಲಿ 27 ಸಂಘಟನೆಗಳ ಹೆಸರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.