
ನವದೆಹಲಿ(ಜ.25): ಮೂರು ವಿಧದ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಭಾರತದ ಮುಡಿಗೇರಿಸಲು ನೇತೃತ್ವ ವಹಿಸಿದ್ದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪದ್ಮಭೂಷಣ ಹಾಗೂ 6500 ಹಾಡುಗಳಿಗೆ ಸಂಗೀತ ಸಂಯೋಜನೆ ನೀಡಿದ್ದ ಭಾರತದ ಸಂಗೀತ ಮಾಂತ್ರಿಕ ಎಂದೆ ಖ್ಯಾತಿ ಗಳಿಸಿರುವ ಇಳಿಯರಾಜ ಅವರಿಗೆ ಭಾರತದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಲಭಿಸಿದೆ.
ಕೇಂದ್ರ ಸರ್ಕಾರ ಒಟ್ಟು 85 ಮಂದಿಗೆ ಪದ್ಮ ಪ್ರಶಸ್ತಿಯನ್ನು ನೀಡಿದ್ದು ಮೂವರಿಗೆ ಪದ್ಮವಿಭೂಷಣ, 9 ಮಂದಿಗೆ ಪದ್ಮಭೂಷಣ ಹಾಗೂ 73 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಇಳಯರಾಜ ಅವರು ತಮಗೆ ಗೌರವಿಸಿರುವ ಪ್ರಶಸ್ತಿಯನ್ನು ಪ್ರಧಾನಿ ಮೋದಿ ತಮಿಳು ನಾಡು ಹಾಗೂ ತಮಿಳು ಜನರಿಗೆ ಅರ್ಪಿಸಿರುವ ಗೌರವ ಎಂದು ತಿಳಿಸಿದ್ದಾರೆ. ಪ್ರಶಸ್ತಿ ಪಡೆದವರಲ್ಲಿ 97 ವರ್ಷದ ಕನ್ನಡತಿ ಸೂಲಗತ್ತಿ ನರಸಮ್ಮ ಹಾಗೂ 99 ವರ್ಷದ ಟೆಬಿಟಿಯನ್ ಸ್ವಾತಂತ್ರ ಹೋರಾಟಗಾರೊಬ್ಬರಿಗೆ ಲಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.