
ನವದೆಹಲಿ[ಫೆ.11]: ಪವಿತ್ರ ನದಿ ಗಂಗೆ ಶುದ್ಧೀಕರಣಕ್ಕಾಗಿ ಕೈಗೆತ್ತಿಕೊಂಡಿರುವ ‘ನಮಾಮಿ ಗಂಗೆ’ ಯೋಜನೆಗೆ ಸಂಪನ್ಮೂಲ ಸಂಗ್ರಹಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ಬಂದಿದ್ದ ಸ್ಮರಣಿಕೆಗಳ ಹರಾಜಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
27-28ರಂದು ಪ್ರಧಾನಿಗೆ ಬಂದ ಉಡುಗೊರೆಗಳ ಹರಾಜು!
ಕೆಲವೇ ಸಾವಿರಗಳ ಮೂಲ ಬೆಲೆ ನಿಗದಿ ಮಾಡಿದ್ದರೂ, ಲಕ್ಷ ಲಕ್ಷ ವ್ಯಯಿಸಿ ಸ್ಮರಣಿಕೆಗಳನ್ನು ಜನರು ಖರೀದಿಸಿದ್ದಾರೆ. ಮರದಿಂದ ತಯಾರಿಸಲಾದ ಅಶೋಕ ಸ್ತಂಭಕ್ಕೆ ಹರಾಜಿನಲ್ಲಿ ಕೇವಲ 4 ಸಾವಿರ ರು. ಮೂಲಬೆಲೆ ನಿಗದಿಯಾಗಿತ್ತು. ಆದರೆ 13 ಲಕ್ಷ ಕೊಟ್ಟು ಒಬ್ಬರು ಖರೀದಿ ಮಾಡಿದ್ದಾರೆ.
ಮೋದಿಯ 1800 ಉಡುಗೊರೆಗಳು ಹರಾಜು: ಬಂದ ಹಣ ಏನು ಮಾಡ್ತಾರೆ ಗೊತ್ತಾ?
ಪರಶಿಮನ ಮೂರ್ತಿಯೊಂದಕ್ಕೆ 5000 ರು. ಬೆಲೆ ನಿಗದಿಪಡಿಸಲಾಗಿತ್ತು. ಆದರೆ 10 ಲಕ್ಷ ರು.ಗೆ ಹರಾಜಿನಲ್ಲಿ ಅದು ಮಾರಾಟವಾಗಿದೆ. 15 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಒಟ್ಟು 1800 ಸ್ಮರಣಿಕೆಗಳನ್ನು ಹರಾಜು ಹಾಕಲಾಗಿದೆ. ಶನಿವಾರ ಆ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಹರಾಜಿನಿಂದ ಎಷ್ಟುಹಣ ಸಂಗ್ರಹವಾಯಿತು ಎಂಬ ಮಾಹಿತಿ ಲಭ್ಯವಾಗಿಲ್ಲ.
ಮೋದಿ ಉಡುಗೊರೆಗಳ ಮಾರಾಟ!: ನೀವೂ ಖರೀದಿಸ್ಬೇಕಾ? ಹೀಗೆ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ