ವಿಪಕ್ಷಗಳು ಸಂಸತ್ತನ್ನು ಮುಚ್ಚಬಯಸುತ್ತವೆ: ಮೋದಿ ವಾಗ್ದಾಳಿ

By Suvarna Web DeskFirst Published Dec 19, 2016, 12:38 PM IST
Highlights

ಕಾನ್ಪುರದಲ್ಲಿ ಪರಿವರ್ತನಾ ರ್ಯಾಲಿಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಕೆಲ ಭ್ರಷ್ಟಜನರನ್ನು ರಕ್ಷಿಸಲು ಸಂಸತ್ತಿನಲ್ಲಿ ಘೋಷಣೆ ಕೂಗಲಾಗಿರುವುದು ಇದೇ ಮೊದಲ ಬಾರಿ. ಸರ್ಕಾರವು ಕಪ್ಪು ಹಣವನ್ನು ಮುಗಿಸಬಯಸಿದರೆ, ಪ್ರತಿಪಕ್ಷಗಳು ಸಂಸತ್ತನ್ನು ಮುಚ್ಚ ಬಯಸುತ್ತಿವೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕಾನ್ಪುರ (ಡಿ.19): ಸಂಸತ್ತು ಕಲಾಪಗಳು ನಡೆಯದಿರುವುದಕ್ಕೆ ಪ್ರತಿಪಕ್ಷಗಳನ್ನು ದೂಷಿಸಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರವು ಕಪ್ಪುಹಣವನ್ನು ನಿಯಂತ್ರಿಸಬಯಸುತ್ತದೆ, ಆದರೆ ವಿಪಕ್ಷಗಳು ಸಂಸತ್ತನ್ನು ಮುಚ್ಚಬಯಸುತ್ತವೆ ಎಂದು ಹರಿಹಾಯ್ದಿದ್ದಾರೆ.

ಕಾನ್ಪುರದಲ್ಲಿ ಪರಿವರ್ತನಾ ರ್ಯಾಲಿಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಕೆಲ ಭ್ರಷ್ಟಜನರನ್ನು ರಕ್ಷಿಸಲು ಸಂಸತ್ತಿನಲ್ಲಿ ಘೋಷಣೆ ಕೂಗಲಾಗಿರುವುದು ಇದೇ ಮೊದಲ ಬಾರಿ. ಸರ್ಕಾರವು ಕಪ್ಪು ಹಣವನ್ನು ಮುಗಿಸಬಯಸಿದರೆ, ಪ್ರತಿಪಕ್ಷಗಳು ಸಂಸತ್ತನ್ನು ಮುಚ್ಚ ಬಯಸುತ್ತಿವೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ದೇಶವು ಈಗ ಎರಡು ವಿಭಾಗದಲ್ಲಿ ಹಂಚಿಹೋಗಿದೆ, ಕಪ್ಪುಹಣ, ಭ್ರಷ್ಟಾಚಾರ ಹಾಗೂ ಅಪ್ರಾಮಾಣಿಕತೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ರಾಜಕೀಯ ನಾಯಕರ ವರ್ಗ ಒಂದೆಡೆಯಾದರೆ, ಇನ್ನೊಂದೆಡೆ ಪ್ರಾಮಾಣಿಕತೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವ ಜನತೆ ಇದೆ ಎಂದು ಮೋದಿ ಹೇಳಿದ್ದಾರೆ.

click me!