ಡಜನ್'ಗೂ ಹೆಚ್ಚು ಪಕ್ಷಗಳಿಗೆ ಬ್ಯಾಲೆಟ್ ಪೇಪರ್ ಬೇಕಂತೆ

Published : Apr 10, 2017, 04:36 PM ISTUpdated : Apr 11, 2018, 12:35 PM IST
ಡಜನ್'ಗೂ ಹೆಚ್ಚು ಪಕ್ಷಗಳಿಗೆ ಬ್ಯಾಲೆಟ್ ಪೇಪರ್ ಬೇಕಂತೆ

ಸಾರಾಂಶ

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ನಮಗೆ ಮತಯಂತ್ರಗಳ ಮೇಲೆ ನಂಬಿಕೆಯಿಲ್ಲ. ಹಳೆಯ ಪದ್ಧತಿ ಬ್ಯಾಲೆಟ್ ಪತ್ರಗಳನ್ನು ಅಳವಡಿಸುವಂತೆ' ಚುನಾವಣಾಧಿಕಾರಿಗಳನ್ನು  ನಿಯೋಗದೊಂದಿಗೆ ಭೇಟಿ ಮಾಡಿದ ಸುದ್ದಿಗಾರರಿಗೆ ನಂತರ ತಿಳಿಸಿದ್ದಾರೆ.

ನವದೆಹಲಿ(ಏ.10): ಕಾಂಗ್ರೆಸ್, ಎಎಪಿ, ಬಿಎಸ್ಪಿ'ಎನ್'ಸಿಪಿ ಸಿಪಿಎಂ ಸೇರಿದಂತೆ 16 ರಾಜಕೀಯ ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಬದಲು ಬ್ಯಾಲೆಟ್ ಪತ್ರಗಳನ್ನು ಬಳಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿವೆ.

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ನಮಗೆ ಮತಯಂತ್ರಗಳ ಮೇಲೆ ನಂಬಿಕೆಯಿಲ್ಲ. ಹಳೆಯ ಪದ್ಧತಿ ಬ್ಯಾಲೆಟ್ ಪತ್ರಗಳನ್ನು ಅಳವಡಿಸುವಂತೆ' ಚುನಾವಣಾಧಿಕಾರಿಗಳನ್ನು  ನಿಯೋಗದೊಂದಿಗೆ ಭೇಟಿ ಮಾಡಿದ ಸುದ್ದಿಗಾರರಿಗೆ ನಂತರ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇವಿಎಂ ಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುಂಬರುವ ದೆಹಲಿ ಮುನಿಸಿಪಲ್ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್'ಗಳ ಮೂಲಕ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕೂಡ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಮತ್ತೊಂದು ರಾಜಕೀಯ ಪಕ್ಷ ಎಸ್'ಪಿ ಕೂಡ ಬಿಎಸ್ಪಿ'ಗೆ ಬೆಂಬಲ ವ್ಯಕ್ತಪಡಿಸಿತ್ತು.   

ಇವೆಲ್ಲ ಅಂಶಗಳ ಹಿನ್ನಲೆಯಲ್ಲಿ ಶೀಘ್ರದಲ್ಲೆ ಚುನಾವಣಾ ಆಯೋಗ ಪ್ರಮುಖ ಪಕ್ಷಗಳನ್ನು ಕರೆದು ಸಭೆ ನಡೆಸುವ ಸಾಧ್ಯತೆಯಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?
Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!