ಯುಪಿಎ ಸರ್ಕಾರದ ಅವಧಿಯಲ್ಲಿ ಆಧಾರ್'ನಲ್ಲಿ ಲೋಪ : ಸಂಸದ ರಾಜೀವ್ ಚಂದ್ರಶೇಖರ್ ಆರೋಪ

Published : Apr 10, 2017, 03:06 PM ISTUpdated : Apr 11, 2018, 01:01 PM IST
ಯುಪಿಎ ಸರ್ಕಾರದ ಅವಧಿಯಲ್ಲಿ ಆಧಾರ್'ನಲ್ಲಿ ಲೋಪ : ಸಂಸದ ರಾಜೀವ್ ಚಂದ್ರಶೇಖರ್ ಆರೋಪ

ಸಾರಾಂಶ

ಇದೇ ವೇಳೆ, ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕಾನೂನಿನ ಮಾನ್ಯತೆ ಇಲ್ಲದೆ ಆಧಾರ್​ ಯೋಜನೆ ಜಾರಿಗೆ ತರಲಾಗಿತ್ತು. ಯುಪಿಎ ಸರ್ಕಾರ ಮಾಡಿದ್ದ ಹುಳುಕುಗಳನ್ನು ಈಗಿನ ಬಿಎಪಿ ಸರ್ಕಾರ ಸರಿಪಡಿಸಿದೆ. ಆಧಾರ್​ ಯೋಜನೆಗಾಗಿ ಯುಪಿಎ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿತ್ತು. ಈ ಯೋಜನೆಯ ಬಗ್ಗೆ ಸಂಸತ್ತಿನಲ್ಲಿ ಯಾವ ಚರ್ಚೆಯೂ ನಡೆದಿರಲಿಲ್ಲ ಅಂತ ರಾಜೀವ್ ಆರೋಪಿಸಿದರು.

ನವದೆಹಲಿ(ಏ.10): ಯುಪಿಎ ಸರ್ಕಾರದ ಅವಧಿಯಲ್ಲಿ ಆಧಾರ್ ಬಯೋಮೆಟ್ರಿಕ್​ ಮಾಹಿತಿ ಸಂಗ್ರಹದಲ್ಲಿ ಲೋಪವಾಗಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.

2010ರಿಂದ 2015ರ ವರೆಗೆ ನಡೆದ ಆಧಾರ್ ಬಯೋಮೆಟ್ರಿಕ್​ ಮಾಹಿತಿ ಸಂಗ್ರಹದ ಲೋಪಗಳ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಸಂಸದ ರಾಜೀವ್ ಚಂದ್ರಶೇಖರ್​, ಈ ಮಾಹಿತಿಯ ಸಂಗ್ರಹದಲ್ಲೇ ಹಲವು ಲೋಪಗಳಿವೆ.  ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಅಂತ ಸಂಸತ್ತಿನ ಗಮನಸೆಳೆದರು.

ಇದೇ ವೇಳೆ, ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕಾನೂನಿನ ಮಾನ್ಯತೆ ಇಲ್ಲದೆ ಆಧಾರ್​ ಯೋಜನೆ ಜಾರಿಗೆ ತರಲಾಗಿತ್ತು. ಯುಪಿಎ ಸರ್ಕಾರ ಮಾಡಿದ್ದ ಹುಳುಕುಗಳನ್ನು ಈಗಿನ ಬಿಎಪಿ ಸರ್ಕಾರ ಸರಿಪಡಿಸಿದೆ. ಆಧಾರ್​ ಯೋಜನೆಗಾಗಿ ಯುಪಿಎ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿತ್ತು. ಈ ಯೋಜನೆಯ ಬಗ್ಗೆ ಸಂಸತ್ತಿನಲ್ಲಿ ಯಾವ ಚರ್ಚೆಯೂ ನಡೆದಿರಲಿಲ್ಲ ಅಂತ ರಾಜೀವ್ ಆರೋಪಿಸಿದರು.

ಸರ್ಕಾರ ಆಧಾರ್ ಗೌಪ್ಯತೆ,ಭದ್ರತೆ ಹಾಗೂ ಪ್ರಮಾಣಿಕೃತೆಯ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ