ಗಿರ್ ಅರಣ್ಯ ಪ್ರದೇಶದ ಏಕೈಕ ಮತದಾರ ಭರತ್ ನಿಧನ

Published : Nov 02, 2019, 10:57 AM ISTUpdated : Nov 02, 2019, 11:42 AM IST
ಗಿರ್ ಅರಣ್ಯ ಪ್ರದೇಶದ ಏಕೈಕ ಮತದಾರ ಭರತ್ ನಿಧನ

ಸಾರಾಂಶ

ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಲ್ಲಿರುವ ಆಶ್ರಮ ಹಾಗೂ ಶಿವನ ದೇವಸ್ಥಾನದಲ್ಲಿ ವಾಸವಿರುವ ಏಕಮಾತ್ರ ಮತದಾರ ಮಹಂತ್ ಭರತ್‌ದಾಸ್ ನಿಧನರಾಗಿದ್ದಾರೆ. 

ವೆರಾವಲ್ [ನ.02]: ಇಲ್ಲಿನ ಮತದಾನ ಕೇಂದ್ರದ ಏಕಮಾತ್ರ ಮತದಾರ ಎಂಬ ದಾಖಲೆ ಹೊಂದಿದ್ದ ಪ್ರಭು ಮಹಂತ್ ಭರತ್‌ದಾಸ್ ಬಾಪು ವಯೋಸ ಹಜ ಕಾಯಿಲೆಯಿಂದ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. 

ಪ್ರತಿಯೊಬ್ಬ ಮತದಾರನೂ ತನ್ನ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ 2 ಕಿ.ಮೀ ವ್ಯಾಪ್ತಿಯೊಳಗೆ ಮತದಾನ ಕೇಂದ್ರಗಳಿರಬೇಕು ಎಂಬುದು ಚುನಾವಣಾ ಆಯೋಗದ ನಿಲುವು. 

ಈ ಹಿನ್ನೆಲೆ ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಲ್ಲಿರುವ ಆಶ್ರಮ ಹಾಗೂ ಶಿವನ ದೇವಸ್ಥಾನದಲ್ಲಿ ವಾಸವಿರುವ ಏಕಮಾತ್ರ ಮತದಾರ ಮಹಂತ್ ಭರತ್‌ದಾಸ್ ಅವರಿಗಾಗಿಯೇ ಚುನಾವಣಾ ಆಯೋಗ ಪ್ರತೀ ಚುನಾವಣೆ ಸಂದರ್ಭದಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿತ್ತು.

ವೋಟರ್‌ ಐಡಿಗೂ ಇನ್ಮುಂದೆ ಆಧಾರ್‌ ಲಿಂಕ್‌?.. 

ಇದೀಗ ಏಕೈಕ ಮತದಾರರಾಗಿದ್ದ ಆಶ್ರಮವಾಸಿಯಾಗಿದ್ದ ದಾಖಲೆ ಮಾಡಿದ್ದ ಭರತ್ ಅವರು ಕೊನೆಯುಸಿರೆಳೆದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!