ಒಎನ್'ಜಿಸಿ ಉದ್ಯೋಗಿಗಳಿದ್ದ ಚಾಪರ್ ಕಣ್ಮರೆ, ನಾಲ್ವರ ಸಾವು,ಮೂವರು ನಾಪತ್ತೆ

Published : Jan 13, 2018, 04:20 PM ISTUpdated : Apr 11, 2018, 12:56 PM IST
ಒಎನ್'ಜಿಸಿ ಉದ್ಯೋಗಿಗಳಿದ್ದ ಚಾಪರ್ ಕಣ್ಮರೆ, ನಾಲ್ವರ ಸಾವು,ಮೂವರು ನಾಪತ್ತೆ

ಸಾರಾಂಶ

ಮುಂಬೈ ಜುಹಾ ವಿಮಾನ ನಿಲ್ದಾಣದಲ್ಲಿ ಪವನ್ ಹಾನ್ಸ್ ಚಾಪರ್ ಇಂದು ಬೆಳಿಗ್ಗೆ 10.20ಕ್ಕೆ ಟೇಕ್ ಆಫ್ ಆಗಿ 15 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತು. ಚಾಪರ್'ನಲ್ಲಿದ್ದ 7 ಮಂದಿಯಲ್ಲಿ ಐವರು ಒಎನ್'ಜಿಸಿ ಉದ್ಯೋಗಿಗಳಿದ್ದರು.

ಮುಂಬೈ(ಜ.13): ಒಎನ್'ಜಿಸಿ ಉದ್ಯೋಗಿಗಳಿದ್ದ ಚಾಪರ್ ಟೇಕ್'ಆಫ್ ಆದ ಕೆಲವೇ ನಿಮಿಷಗಳಲ್ಲಿ ಕಣ್ಮರೆಯಾಗಿದ್ದು ಮೂವರು ಮೃತಪಟ್ಟು ನಾಲ್ವರು ಕಣ್ಮರೆಯಾಗಿದ ಘಟನೆ ಮುಂಬೈ ಕರಾವಳಿಯಲ್ಲಿ ನಡೆದಿದೆ

 ಮುಂಬೈ ಜುಹಾ ವಿಮಾನ ನಿಲ್ದಾಣದಲ್ಲಿ ಪವನ್ ಹಾನ್ಸ್ ಚಾಪರ್ ಇಂದು ಬೆಳಿಗ್ಗೆ 10.20ಕ್ಕೆ ಟೇಕ್ ಆಫ್ ಆಗಿ 15 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತು. ಚಾಪರ್'ನಲ್ಲಿದ್ದ 7 ಮಂದಿಯಲ್ಲಿ ಐವರು ಒಎನ್'ಜಿಸಿ ಉದ್ಯೋಗಿಗಳಿದ್ದರು. 4 ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಉಳಿದ ಮೂವರಿಗಾಗಿ ಶೋಧ ನಡೆಸಲಾಗುತ್ತಿದೆ. 7 ಮಂದಿಯಲ್ಲಿ ಇಬ್ಬರು ಪೈಲೆಟ್'ಗಳು ಸೇರಿದ್ದಾರೆ. ಕೆಲವು ಅವಶೇಷಗಳು ಪತ್ತೆಯಾಗಿದ್ದು ಅದು ಚಪರ್'ನದೆ ಎಂಬುದು ಖಚಿತವಾಗಿಲ್ಲ ಎಂದು ನೌಕಾದಳದ ವಕ್ತಾರರು ತಿಳಿಸಿದ್ದಾರೆ.

 ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿ' ಕಾರ್ಯಾಚರಣೆಗಾಗಿ  ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಮನವಿ ಮಾಡಲಾಗಿದ್ದು ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ ಎಂದು ತಿಳಿಸಿದ್ದಾರೆ. 2013ರಲ್ಲಿಯೂ  ಒಎನ್'ಜಿಸಿ ಹೆಲಿಕಾಪ್ಟರ್  ಸಮುದ್ರದಲ್ಲಿ ದುರಂತಕ್ಕೀಡಾಗಿ 12 ಮಂದಿ ಮೃತಪಟ್ಟಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ