
ಗದಗ(ಜ.27): ಶತಾಯುಷಿ ಅಜ್ಜಿಯ ನಾಲ್ಕು ವರ್ಷದ ವನವಾಸ ಅಂತ್ಯವಾಗಿದೆ. ಸ್ವಂತ ಸೂರು ಕಳೆದುಕೊಂಡು ಪರದಾಡುತ್ತಿದ್ದ ಅಜ್ಜಿಗೆ ಕೊನೆಗೂ ಜಿಲ್ಲಾಡಳಿತ ಸ್ಪಂದಿಸಿದೆ. ಅಜ್ಜಿ ಮೊಮ್ಮಗಳಿಗೆ ಸೂರು ಸಿಕ್ಕಿದ್ದು, ಇಬ್ಬರೂ ಈಗ ಸಂಭ್ರಮದಲ್ಲಿದ್ದಾರೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್ .
ಬರೊಬ್ಬರಿ 105 ವರ್ಷದ ಅಜ್ಜಿ ಸ್ವಂತ ಸೂರು ಕಳೆದುಕೊಂಡು ನಾಲ್ಕು ವರ್ಷ ಪರದಾಡಿದ್ದರು. ಆದರೆ ಈಗ ಆ ಅಜ್ಜಿಯ ನಾಲ್ಕು ವರ್ಷದ ವನವಾಸ ಅಂತ್ಯವಾಗಿದೆ. ಗದಗದ ಗಂಗಿಮಡಿ ನಿವಾಸಿ ಶತಾಯಿಷಿ ಅಜ್ಜಿ ಜೈ ತುನಬಿಗೆ ಅಕ್ರಮವಾಗಿ ಆಶ್ರಯ ಮನೆ ಪಡೆದ ಸೈಯದ್ ಬದಾಮಿಯಿಂದ ಪೊಲೀಸರು ಮನೆ ಕೊಡಿಸಿದ್ದಾರೆ.
ಮೊನ್ನೆಯಷ್ಟೇ ಸುವರ್ಣನ್ಯೂಸ್'ನಲ್ಲಿ ಅಜ್ಜಿಯ ಬದುಕಿನ ಬವಣೆ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೊನೆಗೂ ಅಜ್ಜಿಯ ನೆಮ್ಮದಿಗೆ ಕಾರಣವಾಗಿದೆ. ನಿನ್ನೆ ಸಂಜೆ ಗದಗ ಗ್ರಾಮೀಣ ಠಾಣೆಯ ಸಿಪಿಐ ಸೋಮಶೇಖರ್ ಮನೆಯ ಬೀಗ ಮುರಿದು ಅಜ್ಜಿಗೆ ಮನೆ ಕೊಡಿಸಿದ್ದಾರೆ. ಇದರಿಂದ ಅಜ್ಜಿ ಜೈತುನಬಿ ಫುಲ್ ಖುಷ್ ಆಗಿದ್ದಾರೆ.
ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಇವರಿಗೆ ಅವರ ಸ್ವಂತ ಮನೆಯನ್ನು ಕೊಡಿಸಿದೆ. ತಮಗೆ ಮನೆ ಕೊಡಿಸಲು ನೆರವಾದವರಿಗೆ ಅಜ್ಜಿಯ ಮೊಮ್ಮಗಳು ಕೃತಜ್ಞತೆ ಸಲ್ಲಿಸಿದ್ದಾಳೆ. ನಾಲ್ಕು ವರ್ಷದಿಂದ ಮರೆಯಾದ ಮಂದಹಾಸ ಇಂದು ಅಜ್ಜಿಯ ಮುಖದಲ್ಲಿ ಮೂಡಿದೆ. ಅಜ್ಜಿ, ಮೊಮ್ಮಗಳ ಈ ಸಂತಸ ಕಂಡು ಓಣಿಯ ಮಂದಿಯಲ್ಲಿ ಈ ಬಡಜೀವಗಳ ಸಂಭ್ರಮ ಹೀಗೆ ಇರಲಿ ಅಂತ ಹರಿಸಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.