
ಬೆಂಗಳೂರು (ಅ.28): ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಮೇಲೆ ಮತ್ತೆ ಮಸಿ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಇವತ್ತು ಪ್ರೆಸ್ಕ್ಲಬ್ಗೆ ಬಂದಿದ್ದ ಪದ್ಮನಾಭ ಪ್ರಸನ್ನ ಮೇಲೆ ಮಸಿ ದಾಳಿ ನಡೆದಿದೆ.
ಇದೇ ವೇಳೆ ಮಾತಾಡಿದ ಪದ್ಮನಾಭ ಪ್ರಸನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಬಾಡಿಗೆ ಗೂಂಡಾಗಳು ತಮ್ಮ ಮೇಲೆ ಮಸಿ ಎರಚಿ ಹೋದ್ರು ಎಂದು ಆರೋಪಿಸಿದ್ದಾರೆ.
ಪತ್ರಕರ್ತರ ವೇಷದಲ್ಲಿದ್ದವರ ಮೂರ್ನಾಲ್ಕು ಜನ ತಮ್ಮ ಮೇಲೆ ಏಕಾಏಕಿ ಮಸಿ ಎರಚಿದರು. ಬಿಎಸ್ವೈಗೆ ತಾಕತ್ತಿದ್ರೆ ಮುಂದೆ ಬಂದು ಯುದ್ಧ ಮಾಡಲಿ ಎಂದು ಇದೇವೇಳೆ ಪದ್ಮನಾಭ ಪ್ರಸನ್ನ ಆಕ್ರೊಶ ವ್ಯಕ್ತಪಡಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ವಿವಾಹಿತರು ಎಂದು ಆರೋಪ ಮಾಡುವ ಸಲುವಾಗಿ ಸುದ್ದಿಗೋಷ್ಠಿ ನಡೆಸಲು ಅನುಮತಿ ಪಡೆಯಲು ಪದ್ಮನಾಭ ಪ್ರಸನ್ನ ಪ್ರೆಸ್ಕ್ಲಬ್ಗೆ ಬಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.