ದೆಹಲಿಯಲ್ಲಿ ಮಿತಿ ಮೀರಿದೆ ವಾಯುಮಾಲಿನ್ಯ; ಸೋಮವಾರದಿಂದ ಸಮ-ಬೆಸ ಯೋಜನೆ ಜಾರಿ

Published : Nov 09, 2017, 08:31 PM ISTUpdated : Apr 11, 2018, 01:05 PM IST
ದೆಹಲಿಯಲ್ಲಿ ಮಿತಿ ಮೀರಿದೆ ವಾಯುಮಾಲಿನ್ಯ; ಸೋಮವಾರದಿಂದ ಸಮ-ಬೆಸ ಯೋಜನೆ ಜಾರಿ

ಸಾರಾಂಶ

ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿದ್ದು, ಅದನ್ನು ತಗ್ಗಿಸಲು ದೆಹಲಿ ಸರ್ಕಾರ ಮುಂದಾಗಿದೆ. ಸೋಮವಾರದಿಂದ ಸಮ-ಬೆಸ ಯೋಜನೆಯನ್ನು 5 ದಿನಗಳ ಕಾಲ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲಾತ್ ಹೇಳಿದ್ದಾರೆ.

ನವದೆಹಲಿ (ನ.09): ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿದ್ದು, ಅದನ್ನು ತಗ್ಗಿಸಲು ದೆಹಲಿ ಸರ್ಕಾರ ಮುಂದಾಗಿದೆ. ಸೋಮವಾರದಿಂದ ಸಮ-ಬೆಸ ಯೋಜನೆಯನ್ನು 5 ದಿನಗಳ ಕಾಲ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲಾತ್ ಹೇಳಿದ್ದಾರೆ.

ಸೋಮವಾರದಿಂದ 5 ದಿನಗಳ ಕಾಲ ಸಮ-ಬೆಸ ವಾಹನ ಯೋಜನೆ ಜಾರಿಯಾಗಲಿದೆ. ಈ 5 ದಿನಗಳ ಕಾಲ ಸಂಪೂರ್ಣ ಸಹಕಾರ ನೀಡುವಂತೆ ಕೈಲಾಶ್ ಗೆಹ್ಲಾಟ್ ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ. ಓಲಾ ಮತ್ತು ಊಬರ್'ಗಳ  ಬೆಲೆಯನ್ನು ಹೆಚ್ಚು ಮಾಡುವುದಿಲ್ಲ. ಬೆಲೆ ಎಂದಿನಂತೆ ಇರಲಿದೆ ಎಂದು ಭರವಸೆ ನೀಡಿದ್ದಾರೆ.

ಸಿಎನ್'ಜಿ ವಾಹನಗಳು, ಎಲೆಕ್ಟ್ರಿಕ್ ವಾಹನಗಳು, ಹೈಬ್ರೀಡ್ ವಾಹನಗಳು, 12 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವ ಮಹಿಳಾ ಬೈಕ್'ಗಳಿಗೆ ಸಮ-ಬೆಸ ಯೋಜನೆಗಳಿಂದ ವಿನಾಯಿತಿ ನೀಡಲಾಗಿದೆ.

ನಾಳೆಯಿಂದ ದೆಹಲಿಯಾದ್ಯಂತ ಎಲ್ಲಾ 22 ಸಿಎನ್'ಜಿ ಸ್ಟೇಷನ್'ಗಳಲ್ಲಿ ಐಜಿಎಲ್ (ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್) ಸ್ಟಿಕ್ಕರ್'ಗಳು ಲಭ್ಯವಾಗಲಿದೆ. ಹೆಚ್ಚುವರಿ ಬಸ್'ಗಳನ್ನು ಕೂಡಾ ನಿಯೋಜಿಸಲಾಗಿದೆ ಎಂದು ಕೈಲಾಶ್ ಗೆಹ್ಲಾಟ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ ಇಂಡಿಯಾ ನೇಮಕಾತಿ: 154 ಹುದ್ದೆಗಳಿಗೆ ಅರ್ಜಿ ಆಹ್ವಾನ, ತಕ್ಷಣವೇ ಅರ್ಜಿ ಸಲ್ಲಿಸಿ
Viral Video: ವೇದಿಕೆಯಲ್ಲೇ ಮಹಿಳಾ ವೈದ್ಯೆಯ ಹಿಜಾಬ್‌ ತೆಗೆಯಲು ಯತ್ನಿಸಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌