
ಬೆಳಗಾವಿ(ಅ.06): ಕುಂದಾನಗರಿಯ ನೂರಾರು ಜನರು ಕೆ ಎಚ್ ಬಿ ಯಿಂದ ಅಲೌಟ್ಮೆಂಟ್ ಆದ ಜಾಗವನ್ನ ತೆಗೆದುಕೊಂಡು ಗೋಳಾಡುವಂತಾಗಿದೆ. ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ 26 ಎಕೆರೆಗೂ ಅಧಿಕ ಭೂಮಿಯನ್ನ 2005ರಲ್ಲಿ ಕುರಣಿ ಕುಟುಂಬದಿಂದ ಜಾಗ ಖರೀದಿಸಲಾಗಿತ್ತು. ಆದ್ರೆ ಕುರಣಿ ಸಹೋದರರು ಪೀತ್ರಾರ್ಜಿತ ಆಸ್ತಿಯಲ್ಲಿ ಸಹೋದರಿ ಕಮಲಾ ಎಂಬುವರಿಗೆ ಆಸ್ತಿ ನೀಡಿರುವುದಿಲ್ಲ. ಇದನ್ನ ಪ್ರಶ್ನಿಸಿ ಕಮಲಾ 2004ರಲ್ಲಿ ಬೆಳಗಾವಿಯ 2ನೇ ಹಿರಿಯ ಸಿವಿಎಲ್ ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ, ಬೆಳಗಾವಿ ಸಿವಿಎಲ್ ನ್ಯಾಯಾಲಯ ಕುರಣಿ ಸಹೋದರರು ಕರ್ನಾಟಕ ಹೌಸಿಂಗ್ ಬೋರ್ಡ್ ಗೆ ಮಾರಾಟ ಮಾಡಿದ್ದನ್ನ ರದ್ದು ಪಡಿಸಿ ಆದೇಶ ಹೊರಡಿಸಿದೆ. ಇದರಿಂದ ನಿವೇಶನ ಖರೀದಿಸಿದ್ದ 133 ಗ್ರಾಹಕರು ಅತಂತ್ರರಾಗಿದ್ದಾರೆ.
ಇದರಲ್ಲಿ ಕರ್ನಾಟಕ ಹೌಸ್ಸಿಂಗ್ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ಅಧಿಕಾರಿಗಳ ಹೀಗೆ ವಿವಾದಿತ ಭೂಮಿಯ ಪೂರ್ವಾಪರ್ವ ಪರಿಶೀಲನೆ ನಡೆಸದಿರುವುದು ಗ್ರಾಹಕರಿಗೆ ಮುಳುವಾಗಿದೆ.
ಒಟ್ಟಿನಲ್ಲಿ, ಕರ್ನಾಟಕ ಹೌಸ್ಸಿಂಗ್ ಬೋರ್ಡ್ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಅಮಾಯಕ ಜನರು ಪರದಾಡುವಂತಾಗಿದೆ. ಆದ್ರೆ ಆತಂಕದಲ್ಲಿರುವ ಜನರ ಬೆನ್ನಿಗೆ ನಿಲ್ಲಬೇಕಾದ ಅಧಿಕಾರಿಗಳು ಮಾತ್ರ ತಲೆಕೆಡೆಸಿಕೊಂಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.