
ಬೆಂಗಳೂರು (ಜು. 28): ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿರುವ ಹಾಗೂ ಗುರುನಂದನ್ ಅಭಿನಯದ ರಾಜು ಕನ್ನಡ ಮೀಡಿಯಂ ಸಿನಿಮಾ ನಿರ್ಮಾಪಕರಿಂದ ಜಯಣ್ಣ ಫಿಲ್ಮ್ ಸಂಸ್ಥೆಗೆ ಮೋಸವಾಗಿದೆ ಎನ್ನಲಾಗಿದೆ.
ನಾಳೆ ಕನ್ನಡ ಜೀ ವಾಹಿನಿಯಲ್ಲಿ ರಾಜು ಕನ್ನಡ ಮೀಡಿಯಂ ಸಿನಿಮಾ ಪ್ರಸಾರ ಹಿನ್ನಲೆ ನಿರ್ಮಾಪಕ ಕೆ ಎ ಸುರೇಶ್’ಗೆ ಜಯಣ್ಣ ಫಿಲ್ಮ್ ಸಂಸ್ಥೆ ನೋಟಿಸ್ ನೀಡಿದೆ.
ಜಯಣ್ಣ ಫಿಲ್ಮ್ ಸಂಸ್ಥೆಯಲ್ಲಿ ರಾಜು ಕನ್ನಡ ಮೀಡಿಯಂ ಸಿನಿಮಾ ರೈಟ್ಸ್ ಇದ್ದರೂ ನಿರ್ಮಾಪಕ ಕೆ ಎ ಸುರೇಶ್ ಬೇರೆ ವಾಹಿನಿಗೆ ರೈಟ್ಸ್ ನೀಡಿರುವ ಆರೋಪ ಕೇಳಿ ಬಂದಿದೆ. ಕನ್ನಡ ಜೀ ವಾಹಿನಿ ಹಾಗೂ ರಾಜು ಕನ್ನಡ ಮೀಡಿಯಂ ನಿರ್ಮಾಪಕ ಕೆ ಎ ಸುರೇಶ್’ಗೆ ಸಿನಿಮಾ ಪ್ರಸಾರ ಆಗದಂತೆ ಸಿಟಿ ಸಿವಿಲ್ ಕೋರ್ಟ್ ನಿಂದ ನೋಟಿಸ್ ಕಳುಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.