ಗುಡ್ಡ ಅಗೆಯುವ ವೇಳೆ ಬಂಡೆ ಕಲ್ಲು ಬಿದ್ದು ಕಾರ್ಮಿಕ ಸಾವು

By Web DeskFirst Published Jul 28, 2018, 7:09 PM IST
Highlights

ಗುಡ್ಡ ಅಗೆಯುವ ವೇಳೆ ಬಂಡೆ ಕಲ್ಲು ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯನ್ನ ಪೊಲೀಸರು ತಮ್ಮ ವಾಹದಲ್ಲೇ ಚಿಕಿತ್ಸೆಗೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯ ಕಾರ್ಮಿಕ ಸಾವನ್ನಪ್ಪಿದ್ದಾನೆ.  ಬೀದರ್’ನ ಚೊಂಡಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ವಿರೇಶ್ ಎಂಬುವರು ಜೆಸಿಬಿ ಮೂಲಕ ಬೆಟ್ಟವನ್ನು ಅಗೆಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. 

ಬೀದರ್ (ಜು. 28): ಗುಡ್ಡ ಅಗೆಯುವ ವೇಳೆ ಬಂಡೆ ಕಲ್ಲು ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯನ್ನ ಪೊಲೀಸರು ತಮ್ಮ ವಾಹದಲ್ಲೇ ಚಿಕಿತ್ಸೆಗೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯ ಕಾರ್ಮಿಕ ಸಾವನ್ನಪ್ಪಿದ್ದಾನೆ. 

ಬೀದರ್’ನ ಚೊಂಡಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ವಿರೇಶ್ ಎಂಬುವರು ಜೆಸಿಬಿ ಮೂಲಕ ಬೆಟ್ಟವನ್ನು ಅಗೆಯುತ್ತಿದ್ದರು. ಈ ವೇಳೆ ಜೆಸಿಬಿ ಮೇಲೆ ಬೆಟ್ಟ ಕುಸಿದು ಬಿದ್ದಿದೆ. ಜೆಸಿಬಿ ಸಮೇತವಾಗಿ ಚಾಲಕ ವಿರೇಶ್ ಬೆಟ್ಟದ ಮಧ್ಯೆ ಸಿಲುಕಿಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಕೂಡಲೇ ಜನವಾಡ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಜನವಾಡ ಪೊಲೀಸರು ಪರಿಶೀಲನೆ ನಡೆಸಿದರು.

ಮತ್ತೊಂದು ಕಡೆ ಇಂದು ಖಾಸಗಿ ಆಸ್ಪತ್ರೆಯ ವೈದ್ಯರ ಮುಷ್ಕರ ಹಿನ್ನೆಲೆ ಎಚ್ಚೆತ್ತುಕೊಂಡ ಪೊಲೀಸರು ಗಾಯಾಳು ವೀರೇಶ್ ನನ್ನು  ತಮ್ಮ ವಾಹನದಲ್ಲೇ ಬೀದರ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ರು. ಆದರೆ ದುರಾದೃಷ್ಟವಶಾತ್ ಮಾರ್ಗಮಧ್ಯೆ ವೀರೇಶ್ ಸಾವನ್ನಪ್ಪಿದ್ದಾನೆ. 

ಇನ್ನು ಚೊಂಡಿ ಗ್ರಾಮದ ಅರಣ್ಯಪ್ರದೇಶದಲ್ಲಿ ನಸೀಮ್ ಎಂಬುವರು ಅಕ್ರಮ ಕಲ್ಲುಗಣಿಗಾರಿಕೆಗಾಗಿ ಬೆಟ್ಟವನ್ನ ಅಗೆಯುತ್ತಿದ್ದರು ಎನ್ನುವ ಆರೋಪಗಳು ಸಹ ಕೇಳಿ ಬಂದಿವೆ.
 

click me!