
ಮುಂಬೈ : ನೀರವ್ ಮೋದಿ ಪಿಎನ್’ಬಿಗೆ ವಂಚನೆ ಮಾಡಿ ದೇಶ ಬಿಟ್ಟು ಇದೀಗ ಪರಾರಿಯಾಗಿದ್ದಾರೆ. ಕೋಟ್ಯಂತರ ರು ವಂಚನೆ ಮಾಡಿದ್ದಾರೆ.
ಆದರೆ ಈ ಬ್ಯಾಂಕಿನಲ್ಲಿ ನಮ್ಮ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರೂ ಕೂಡ ಕಾರು ಖರೀದಿಗಾಗಿ ಸಾಲ ಪಡೆದುಕೊಂಡಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಕಾರು ಖರೀದಿಗಾಗಿ ಶಾಸ್ತ್ರಿ ಅವರು 5000 ರು. ಸಾಲ ಮಾಡಿದ್ದು, ಅವರು ತಾಷ್ಕೆಂಟ್’ಗೆ ತೆರಳಿದ್ದ ವೇಳೆ ನಿಧನ ಹೊಂದಿದರು. ಇದರಿಂದ ಅವರ ಪತ್ನಿ ಲಲಿತಾ ಅವರು ಪಿಂಚಣಿ ಹಣದಿಂದ ಸಾಲವನ್ನು ತೀರಿಸಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.
ಈ ವಿಚಾರವನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ಅವರು ಬಹಿರಂಗ ಮಾಡಿದ್ದಾರೆ. ತಮ್ಮ ತಂದೆ ಸರ್ಕಾರಿ ಕಾರನ್ನು ಬಳಸಲು ಬಿಡುತ್ತಿರಲಿಲ್ಲ. ಆದ್ದರಿಂದ ಕಾರು ಖರೀದಿಸಲು ಬಯಸಿದ್ದರಿಂದ ಸಾಲ ಮಾಡಲಾಗಿತ್ತು ಎಂದು ಹೇಳಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.