ನಾಳೆ ಬಂದ್ ಇರುತ್ತೋ..? ಇರುವುದಿಲ್ಲವೋ..?

Published : Aug 01, 2018, 09:07 AM ISTUpdated : Aug 01, 2018, 10:22 AM IST
ನಾಳೆ ಬಂದ್ ಇರುತ್ತೋ..? ಇರುವುದಿಲ್ಲವೋ..?

ಸಾರಾಂಶ

ನಾಳೆ ಕರ್ನಾಟಕ ಬಂದ್ ಮಾಡಬೇಕೋ ಬೇಡವೋ ಎನ್ನುವ ವಿಚಾರ ಬುಧವಾರ ತೀರ್ಮಾನವಾಗಲಿದೆ. ಇಂದು ಉತ್ತರ ಕರ್ನಾಟಕ ಮುಖಂಡರು ಈ ಸಂಬಂಧ ಸಭೆ ಸೇರಿ ತೀರ್ಮಾನ ಮಾಡಲಿದ್ದಾರೆ. 

ಬೆಂಗಳೂರು :  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರವಾಗಿ ನಾಳೆ ಬಂದ್ ಮಾಡಬೇಕೋ ಬೇಡವೋ ಎನ್ನುವ ವಿಚಾರವಾಗಿ  ಇಂದು ಮಧ್ಯಾಹ್ನ ಸ್ಪಷ್ಟ ನಿರ್ಧಾರ ಹೊರ   ಬೀಳಲಿದೆ. 

ಬಂದ್ ನಡೆಸುವ ವಿಚಾರವಾಗಿ ಇಂದು ಮಧ್ಯಾಹ್ನದ ವೇಳೆ ಉತ್ತರ ಕರ್ನಾಟಕದ ಮುಖಂಡರು ಬೆಂಗಳೂರಿನಲ್ಲಿ ಸಭೆ ಸೇರಲಿದ್ದಾರೆ.  ಸಭೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತ ಅಧ್ಯಕ್ಷ ಸೋಮಶೇಖರ್ ಕೊತಂಬರಿ, ಗೌರವಾಧ್ಯಕ್ಷ ಬಸವರಾಜ ದಿಂಡೂರ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. 

ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಹೋರಾಟಗಾರರು ಭೇಟಿ ಮಾಡಿದ್ದು ಈ ವೇಳೆ ಸಿಎಂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬಂದ್ ವಾಪಸು ಪಡೆಯುವ ಸಾದ್ಯತೆ ಇದೆ. 

ಮುಖ್ಯಮಂತ್ರಿ ಗಳಿಗೆ ಕಾಲಾವಕಾಶ ನೀಡಲು ಚಿಂತನೆ ನಡೆಸಿದ್ದು, ಎಲ್ಲವೂ ಕೂಡ ಕೂಡ ಇಂದು ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ