
ಬೆಂಗಳೂರು[ಅ. 03] ಯಾರೋ ಸರ್ಕರಿ ನೌಕರ, ಹಿರಿಯ ಅಧಿಕಾರ ಯಾವುದೋ ಕಾರಣಕ್ಕೆ ನನಗೆ ಆಗುವುದಿಲ್ಲ. ಆತನಿಗೆ ಬುದ್ಧಿ ಕಲಿಸಬೇಕು.. ಹಾಗಾದರೆ ಆತ ಭ್ರಷ್ಟಾಚಾರ ಮಾಡಿದ್ದಾನೆ ಎಂದು ಒಂದು ಮೂಗರ್ಜಿಯನ್ನು ಬರೆದು ಲೋಕಾಯುಕ್ತಕ್ಕೋ.. ಪೊಲೀಸರಿಗೋ..ಎಸಿಬಿಗೋ ಕಳಿಸಿದ್ರೆ ಆಯ್ತು ಬಿಡಿ! ಇನ್ನು ಮುಂದೆ ಇಂಥ ಕೆಲಸಗಳನ್ನೆಲ್ಲ ಮಾಡಲು ಸಾಧ್ಯವೇ ಇಲ್ಲ.
ಮೂಗರ್ಜಿಗಳನ್ನು ಮೂಲೆಯಲ್ಲಿಡಲು ಆದೇಶ ನೀಡಲಾಗಿದೆ. ಸರ್ಕಾರಿ ನೌಕರರ ವಿರುದ್ಧ ನೀಡುವ ಅನಾಮಧೇಯ ಪತ್ರಗಳಿಗೆ ಬೆಲೆ ಇಲ್ಲ. ಅನಾಮಧೇಯ ಪತ್ರಗಳ ಮೇಲೆ ತನಿಖೆ ನಡೆಸದೇ ಇರಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ನೆರೆ ಪರಿಹಾರಕ್ಕೆ ಹಣ ಇಲ್ಲ: ಬಿಎಸ್ ಯಡಿಯೂರಪ್ಪ
ಸರ್ಕಾರಿ ನೌಕರರ ಬಹುದಿನದ ಬೇಡಿಕೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಈಡೇರಿಸಿದ್ದಾರೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ಅನಾಮಧೇಯ ಪತ್ರಗಳಿಗೆ ಬೆಲೆ ನೀಡದಿರಿ. ಹೆಸರು ವಿಳಾಸ ಇಲ್ಲದೆ ಸಲ್ಲಿಕೆಯಾಗುವ ದೂರುಗಳನ್ನು ಫೈಲ್ ಮಾಡಿ ಇಡಿ. ಹೆಸರು ಇಲ್ಲದೆ ಸಲ್ಲಿಕೆಯಾಗುವ ದೂರಿನ ಮೇಲೆ ತನಿಖೆ ನಡೆಸಬೇಡಿ ಎಂದು ಸಿಎಂ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.