ಸೇನೆಯಲ್ಲಿ ಶಸ್ತ್ರಾಸ್ತ್ರ ಕೊರತೆ ಇಲ್ಲ: ಸಂಸತ್ತಿಗೆ ಸಚಿವ ಜೇಟ್ಲಿ ಸ್ಪಷ್ಟನೆ

Published : Jul 26, 2017, 06:44 AM ISTUpdated : Apr 11, 2018, 01:00 PM IST
ಸೇನೆಯಲ್ಲಿ ಶಸ್ತ್ರಾಸ್ತ್ರ ಕೊರತೆ ಇಲ್ಲ: ಸಂಸತ್ತಿಗೆ ಸಚಿವ ಜೇಟ್ಲಿ ಸ್ಪಷ್ಟನೆ

ಸಾರಾಂಶ

ಸಿಎಜಿ ವರದಿಯಲ್ಲಿ ಪ್ರಸ್ತಾಪಿಸವಾಗಿರುವ ಕೊರತೆಯ ಅಂಶ, ಯಾವುದೋ ಒಂದು ಸಮಯಕ್ಕೆ ಸೀಮಿತವಾಗಿದ್ದು, ಆದರೆ ಇದೀಗ ಆ ಪರಿಸ್ಥಿತಿ ಇಲ್ಲ. ಖರೀದಿ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲಾಗಿದ್ದು, ಅಗತ್ಯ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗಿದೆ. ಹೀಗಾಗಿ ಇದೀಗ ಸೇನೆಯ ಬಳಿ ಅಗತ್ಯ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹ ಇದೆ. ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಸಚಿವ ಅರುಣ್ ಜೇಟ್ಲಿ ಸದನಕ್ಕೆ ಭರವಸೆ ನೀಡಿದರು.

ನವದೆಹಲಿ: ಯುದ್ಧ ನಡೆದರೆ ಭಾರತದ ಸೇನೆಯಲ್ಲಿ ಪ್ರಮುಖ ಶಸ್ತ್ರಾಸ್ತ್ರಗಳು ಕೇವಲ 10 ದಿನದಲ್ಲಿ ಖಾಲಿಯಾಗಲಿವೆ ಎಂಬ ಇತ್ತೀಚಿನ ಮಹಾಲೇಖಪಾಲರ (ಸಿಎಜಿ) ವರದಿ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಆತಂಕ ಬೇಡ. ಭಾರತೀಯ ಸೇನೆ ಬಳಿ ಸೂಕ್ತ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹ ಇದೆ ಎಂದು ಭರವಸೆ ನೀಡಿದೆ.

ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ, ಯಾವುದೇ ದೇಶ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇರಲು ಕನಿಷ್ಠ ೪೦ ದಿನಗಳಿಗೆ ಆಗುವಷ್ಟು ಶಸ್ತ್ರಾಸ್ತ್ರಗಳ ದಾಸ್ತಾನು ಹೊಂದಿರಬೇಕು. ಆದರೆ ಭಾರತೀಯ ಸೇನೆಗೆ ಅಗತ್ಯವಾದ ೧೫೨ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಪೈಕಿ 61 ಶಸ್ತ್ರಾಸ್ತ್ರಗಳ ಪ್ರಮಾಣ ಕೇವಲ 10 ದಿನಕ್ಕೆ ಮಾತ್ರವೇ ಸಾಲುವಷ್ಟಿದೆ ಎಂದು ಪ್ರಸ್ತಾಪಿಸಿತ್ತು.

ನೆರೆಯ ಚೀನಾ ಡೋಕ್ಲಾಮ್ ವಿಷಯದ ಮುಂದಿಟ್ಟುಕೊಂಡು ಕಾಲು ಕೆರೆದು ಜಗಳ ಮಾಡುತ್ತಿರುವ ಹೊತ್ತಿನಲ್ಲೇ ಹೊರಬಿದ್ದಿದ್ದ ಸಿಎಜಿ ವರದಿ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ವಿಪಕ್ಷಗಳ ಸದಸ್ಯರು, ರಾಜ್ಯಸಭೆಯಲ್ಲಿ ಸರ್ಕಾರ ಗಮನ ಸೆಳೆದಾಗ ಉತ್ತರಿಸಿದ ರಕ್ಷಣಾ ಖಾತೆ ಸಚಿವ ಅರುಣ್ ಜೇಟ್ಲಿ, ಸಿಎಜಿ ವರದಿಯಲ್ಲಿ ಪ್ರಸ್ತಾಪಿಸವಾಗಿರುವ ಕೊರತೆಯ ಅಂಶ, ಯಾವುದೋ ಒಂದು ಸಮಯಕ್ಕೆ ಸೀಮಿತವಾಗಿದ್ದು, ಆದರೆ ಇದೀಗ ಆ ಪರಿಸ್ಥಿತಿ ಇಲ್ಲ. ಖರೀದಿ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲಾಗಿದ್ದು, ಅಗತ್ಯ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗಿದೆ. ಹೀಗಾಗಿ ಇದೀಗ ಸೇನೆಯ ಬಳಿ ಅಗತ್ಯ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹ ಇದೆ. ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಸದನಕ್ಕೆ ಭರವಸೆ ನೀಡಿದರು.

epaperkannadaprabha.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ