
ನವದೆಹಲಿ (ಏ.18): ಮುಂಬರಲಿರುವ ಮುನಿಸಿಪಲ್ ಕಾರ್ಪೋರೇಶನ್ ಆಫ್ ದಿಲ್ಲಿ (ಎಂಸಿಡಿ) ಚುನಾವಣೆಯಲ್ಲಿ ವಿವಿಪ್ಯಾಟ್ ಅಳವಡಿಸಿರುವ ಇವಿಎಂ ಅನ್ನು ಬಳಸುವಂತೆ ಆಪ್ ಕೋರಿದ್ದ ಅರ್ಜಿಗೆ ತುರ್ತು ರಿಲೀಫ್ ನೀಡಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ.
ಈ ಸಂಬಂಧ 2 ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಭಾರತೀಯ ಚುನಾವಣಾ ಆಯೋಗ ಹಾಗೂ ದೆಹಲಿ ರಾಜ್ಯ ಚುನಾವಣಾ ಆಯೋಗಕ್ಕೆ ಕೋರ್ಟ್ ನೊಟೀಸ್ ನೀಡಿದೆ. ಎಂಸಿಡಿ ಚುನಾವಣೆ ನಡೆಸಲು ವಿವಿಪ್ಯಾಟ್ ಅಳವಡಿಸಿರುವ ಇವಿಎಂ ಬಳಸುವಂತೆ ಕೇಳಲು ಕಾರಣಗಳೇನು ಎಂದು ನ್ಯಾಯಾಲಯ ಆಪನ್ನು ಪ್ರಶ್ನಿಸಿದೆ.
ಮಹಮ್ಮದ್ ತಹೀರ್ ಹುಸೇನ್ ಎನ್ನುವವರು ಅರ್ಜಿ ಸಲ್ಲಿಸಿದ್ದರು. ಇವಿಎಂಗಳಲ್ಲಿ ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ವಿವಿಪ್ಯಾಟ್ ಅಳವಡಿಸಿರುವ ಇವಿಎಂ ಬಳಸಿ ಎಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿನ್ನೆ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.