ಬಯಲು ಶೌಚಕ್ಕೆ ಹೋದ್ರೆ ರೇಷನ್ ಕಟ್ !

Published : Nov 02, 2019, 09:56 AM IST
ಬಯಲು ಶೌಚಕ್ಕೆ ಹೋದ್ರೆ ರೇಷನ್ ಕಟ್ !

ಸಾರಾಂಶ

ಸರ್ಕಾರದಿಂದ ಶೌಚಾಲಯ ನೀಡಿದ್ರೂ ಬಳಸುತ್ತಿಲ್ಲವೇ ಎಚ್ಚರ. ಬಯಲು ಶೌಚಕ್ಕೆ ಹೋದ್ರೆ ರೇಷನ್ ಕಟ್ ಆಗುತ್ತೆ! 

ಬೆಹ್ರಾಂಪುರ[ನ.02]: ಶೌಚಾಲಯ ಬಳಸದೇ ಬಯಲು ಶೌಚಕ್ಕೆ ಅಂಟಿಕೊಂಡಿದ್ದಾರೆನ್ನುವ ಕಾರಣಕ್ಕಾಗಿ ಪಂಚಾಯತ್ ಆಡಳಿತ 20 ಕುಟುಂಬಗಳಿಗೆ ಪಡಿತರ ಹಂಚಿಕೆ ನಿಲ್ಲಿಸಿದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯ ಗೌತಮಿ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. 

ಪಂಚಾಯತ್ ಸಭೆಯಲ್ಲಿ ತೀರ್ಮಾನಿಸಿದಂತೆ ಕಳೆದ 11 ದಿನಗಳಿಂದ ರೇಷನ್ ನೀಡಲಾಗಿಲ್ಲ. ಶೌಚಾಲಯಗಳನ್ನು ಬಳಸಿ ಎಂದು ಹೇಳಿದ ಬಳಕವೂ ಬಯಲು ಶೌಚಕ್ಕೆ ಹೋಗುವುದು ಮುಂದುವರಿಸಿದ್ದರು.   

ಇದೇನು ಅಚ್ಚರಿ! ದೆಹಲಿಯಲ್ಲಿ ಟಾಯ್ಲೆಟ್ ಗಾಗಿಯೇ ಇದೆ ಒಂದು ಮ್ಯೂಸಿಯಂ!...

ಯಾವುದೇ ರೀತಿಯ ಸೂಚನೆಗಳನ್ನು ನೀಡಿದ್ದರೂ ಸಹ ರಸ್ತೆ ಪಕ್ಕದಲ್ಲೇ ಶೌಚಕ್ಕೆ ಹೋಗಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೇಷನ್ ನಿಲ್ಲಿಸಲು ತೀರ್ಮಾನಿಸಲಾಯಿತು ಎಂದು ಗ್ರಾಪಂ ಸದಸ್ಯ ಸುಶಾಂತ್ ಸ್ವೈನ್‌ತಾ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ