
ನವದೆಹಲಿ(ಏ.11): ತೈಲ ಬಳಕೆ ಇಳಿಕೆ ಮಾಡುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಮೇ 14ರಿಂದ ದೇಶಾದ್ಯಂತ ಭಾನುವಾರದಂದು ಪೆಟ್ರೋಲ್ ಬಂಕ್ ಸೇವೆ ಸ್ಥಗಿತಗೊಳಿಸಲು ತೈಲ ಮಾರಾಟಗಾರರ ಒಕ್ಕೂಟ ನಿರ್ಧರಿಸಿದೆ. ಇದೇ ವೇಳೆ ತೈಲ ಕಂಪನಿಗಳು ವಿತರಕರ ಕಮಿಷನ್ ಹೆಚ್ಚಳ ಮಾಡದೇ ಇರುವುದನ್ನು ವಿರೋಸಿ ಪೆಟ್ರೋಲ್ ಪಂಪ್ ಮಾಲೀಕರು ಮೇ 10ರಂದು ಬಂಕ್ಗಳನ್ನು ಮುಚ್ಚಿ ‘ಖರೀದಿ ರಹಿತ ದಿನ’ ಆಚರಿಸಲಿದ್ದಾರೆ.
ವಿತರಕರ ಕಮಿಷನ್ ಅನ್ನು ಪರಿಷ್ಕರಿಸುವುದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಜನವರಿಯಲ್ಲಿ ಪೆಟ್ರೋಲ್ ಪಂಪ್ ಮಾಲೀಕರು ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದರು. ಆದರೆ, ಇದುವರೆಗೂ ಕಮಿಷನ್ ಹೆಚ್ಚಳ ಆದೇಶ ಹೊರಬಿದ್ದಿಲ್ಲ. ಹೀಗಾಗಿ ಮೇ 14ರಿಂದ ಪ್ರತಿ ಭಾನುವಾರ ವಾರದ ರಜೆ ಪಡೆಯುವುದಾಗಿ ಸಂಘದ ಅಧ್ಯಕ್ಷ ರವಿ ಶಿಂಧೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.