ಕಾಂಗ್ರೆಸ್ ಹಿರಿಯರಿಗಿಲ್ಲ ಸಚಿವ ಸ್ಥಾನ, ರಾಹುಲ್ ನೀಡಿದ ಶಾಕ್!

Published : Jun 02, 2018, 11:23 AM ISTUpdated : Jun 02, 2018, 11:24 AM IST
ಕಾಂಗ್ರೆಸ್ ಹಿರಿಯರಿಗಿಲ್ಲ ಸಚಿವ ಸ್ಥಾನ, ರಾಹುಲ್ ನೀಡಿದ ಶಾಕ್!

ಸಾರಾಂಶ

 'ಹಿರಿಯ ಶಾಸಕರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಪಕ್ಷ ಸಂಘಟಿಸಿಲ್ಲ. ಅವರೇ ಕಷ್ಟ ಪಟ್ಟು ಗೆದ್ದು ಬರೋ ಪರಿಸ್ಥಿಯಲ್ಲಿದ್ದಾರೆ. ಯಾಕೆ ಸಚಿವ ಸ್ಥಾನ ನೀಡಬೇಕು?' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ.

ಬೆಂಗಳೂರು: 'ಹಿರಿಯ ಶಾಸಕರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಪಕ್ಷ ಸಂಘಟಿಸಿಲ್ಲ. ಅವರೇ ಕಷ್ಟ ಪಟ್ಟು ಗೆದ್ದು ಬರೋ ಪರಿಸ್ಥಿಯಲ್ಲಿದ್ದಾರೆ. ಯಾಕೆ ಸಚಿವ ಸ್ಥಾನ ನೀಡಬೇಕು?' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ.

'ಅಪ್ಪಟ ಬ್ರಾಹ್ಮಣರಲ್ಲದಿದ್ದರೂ, ಬ್ರಾಹ್ಮಣ ಕೋಟಾದಲ್ಲಿ ಸದ ಸಚಿವ ಸ್ಥಾನ ಪಡೆಯುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬಾರದು,' ಎಂದು ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರಿಗೆ ಸಚಿವ ಸ್ಥಾನ ನೀಡಬಾರದೆಂದು ಆಗ್ರಹಿಸಿ ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಹಾಗೂ ಗಾಂಧಿನಗರದ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು 

ಈಗಾಗಲೇ ಸಚಿವ ಸ್ಥಾನ ತಪ್ಪುವ ಸೂಚನೆ ಸಿಕ್ಕಿರುವ ದೇಶಪಾಂಡೆ ಅವರು ಹೊಸ ಪಟ್ಟು ಹಿಡಿದಿದ್ದು, 'ದೇವೇಗೌಡ ರ ಸಂಪುಟದಲ್ಲಿ ಕೆಲಸ ಮಾಡಿದವನು‌ ನಾನು. ರಾಮಕೃಷ್ಣ ಹೆಗಡೆ ಜೊತೆ ಕೆಲಸ ಮಾಡಿದ್ದೇನೆ. ಈಗ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡಲಾರೆ. ಅವರಿಗೆ ಸಹಪಾಠಿ ಆಗಲಾರೆ,' ಎಂದು ಹೇಳುತ್ತಿದ್ದು, 'ನನಗೆ ಪಕ್ಷದ ಜವಾಬ್ದಾರಿ ಕೊಡಿ. ಸಮರ್ಥವಾಗಿ ನಿಭಾಯಿಸುವೆ,' ಎಂದು ದುಂಬಾಲು ಬಿದ್ದಿದ್ದಾರೆನ್ನಲಾಗುತ್ತಿದೆ.

ದೇಶಪಾಂಡೆ ಅವರ ಈ ಬೇಡಿಕೆಯಿಂದ ರಾಹುಲ್ ಗಾಂಧಿಯ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ಈಗಾಗಲೇ ಈ ಪದವಿಗಾಗಿ ರೇಸ್‌ನಲ್ಲಿರುವ ಡಿ.ಕೆ.ಶಿವಕುಮಾರ್ ಮತ್ತು ಕೆ.ಎಚ್.ಮುನಿಯಪ್ಪ ಅವರು ರೇಸ್‌ನಲ್ಲಿದ್ದಾರೆ. ಮುಂದಿನ ವಾರದಲ್ಲಿ ಈ ಸ್ಥಾನಕ್ಕೆ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗ್ಳೂರು ಕಂಪನಿಯಿಂದ 3 ಲಕ್ಷಲಂಚ: ಸಿಬಿಐನಿಂದ ಲೆ.ಕರ್ನಲ್‌ ಬಂಧನ, ಬೆಚ್ಚಿಬೀಳಿಸುವ ಭ್ರಷ್ಟಾಚಾರ ಬಯಲು!
ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಸಚಿವೆ ಶೋಭಾ ಕರಂದ್ಲಾಜೆ