ಕೇಂದ್ರದಿಂದ ಸಿಗದ ಗ್ರೀನ್ ಸಿಗ್ನಲ್ : ಬಿ.ಎಸ್‌. ಯಡಿಯೂರಪ್ಪ ಚಡಪಡಿಕೆ

Published : Jul 25, 2019, 01:39 PM ISTUpdated : Jul 25, 2019, 04:43 PM IST
ಕೇಂದ್ರದಿಂದ ಸಿಗದ ಗ್ರೀನ್ ಸಿಗ್ನಲ್ :  ಬಿ.ಎಸ್‌. ಯಡಿಯೂರಪ್ಪ ಚಡಪಡಿಕೆ

ಸಾರಾಂಶ

ಸರ್ಕಾರ ರಚನೆ ಮಾಡಲು ಉತ್ಸುಕರಾಗಿ ಕಾದು ಕುಳಿತಿದ್ದ ಯಡಿಯೂರಪ್ಪ ಈಗ ಚಡಪಡಿಕೆಯಲ್ಲಿದ್ದಾರೆ. ಬಿಜೆಪಿ ಹೈ ಕಮಾಂಡ್ ಯಾವುದೇ ಸೂಚನೆ ನೀಡದ ಹಿನ್ನೆಲೆ ಆತಂಕಗೊಂಡಿದ್ದಾರೆ. 

ಬೆಂಗಳೂರು [ಜು.25]: ಮೈತ್ರಿ ಸರ್ಕಾರ ಪತನಗೊಂಡು 24 ಗಂಟೆ ಕಳೆದರೂ ಬಿಜೆಪಿ ಸರ್ಕಾರ ರಚನೆ ಬಗ್ಗೆ ಪಕ್ಷದ ಹೈಕಮಾಂಡ್‌ ಯಾವುದೇ ಗ್ರೀನ್‌ ಸಿಗ್ನಲ್‌ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಚಡಪಡಿಕೆಯಲ್ಲಿದ್ದಾರೆ.

"

ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡ ಬೆನ್ನಲ್ಲೇ ಹೊಸ ಸರ್ಕಾರ ರಚಿಸುವ ಉಮೇದಿ ಬಿಜೆಪಿಯಲ್ಲಿತ್ತು. ಆದರೆ, ಬಿಜೆಪಿ ಹೈಕಮಾಂಡ್‌ ಸರ್ಕಾರ ರಚನೆ ಬಗ್ಗೆ ಇನ್ನೂ ಯಾವುದೇ ಸಂದೇಶ ನೀಡದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತ ಜಗದೀಶ್ ಶೆಟ್ಟರ್ ನಿಯೋಗ ದಿಲ್ಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಆದರೆ ಈ ಭೇಟಿ ಇನ್ನೂ ಪರಿಪೂರ್ಣವಾದಂತೆ ಕಂಡು ಬರುತ್ತಿಲ್ಲ. ಸರ್ಕಾರ ರಚನೆ ಮಾಡಲು ಈಗಾಗಲೇ ಮುಹೂರ್ತ ಫಿಕ್ಸ್ ಮಾಡಿ ಕಾದು ಕುಳಿತಿರುವ ನಾಯಕರಿಗೆ ಹೈ ಕಮಾಂಡ್ ಬ್ರೇಕ್ ಹಾಕುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Four Stars of Destiny: ಭಾರತ ಸರ್ಕಾರ ಮಾಜಿ ಸೇನಾ ಮುಖ್ಯಸ್ಥ ನರವಾಣೆ ಪುಸ್ತಕ ನಿಷೇಧಿಸಲು ಕಾರಣವೇನು?
ಇದ್ದ ಜಾಗವನ್ನು ಸದುಪಯೋಗ ಮಾಡ್ಕೊಂಡ Neenadhe Naa Serial ನಟ ದಿಲೀಪ್‌ ಶೆಟ್ಟಿಯ ಸುಂದರ Home Tour