
ಜೈಪುರ: ರಾಜಸ್ಥಾನದ ಎಲ್ಲಾ ಸರ್ಕಾರಿ ವಿವಿಗಳಲ್ಲಿ ಈ ವರ್ಷ ಗಾಂಧಿ ಜಯಂತಿ ರಜೆಯನ್ನು ರದ್ದುಗೊಳಿಸಲಾಗಿದೆ.
ರಾಜ್ಯದ ಎಲ್ಲಾ ವಿವಿಗಳ ಕುಲಪತಿಯಾಗಿರುವ ರಾಜ್ಯಪಾಲರ ಕಛೇರಿಯಿಂದ ಬಿಡುಗಡೆಯಾಗಿರುವ 2017-18 ಸಾಲಿನ ಶೈಕ್ಷಣಿಕ ಕ್ಯಾಲೆಂಡರ್’ನಲ್ಲಿ ಈ ವರ್ಷ ಗಾಂಧಿ ಜಯಂತಿಯ ರಜೆಯನ್ನು ರದ್ದುಗೊಳಿಸಲಾಗಿದೆ.
ಆದರೆ ರಾಮದೇವ್ (ರಾಜಸ್ಥಾನದ ಜಾನಪದ ದೇವರು), ಗುರು ನಾನಕ್ ದೇವ್, ಮಹಾವೀರ ಜಯಂತಿ ಹಾಗೂ ಮಹಾರಾಣಾ ಪ್ರತಾಪ್ ಜಯಂತಿಗಳಿಗೆ ರಜೆಯನ್ನು ಮುಂದುವರೆಸಲಾಗಿದೆ.
ಹೊಸ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್’ನಲ್ಲಿ ಮುಹರ್ರಮ್’ಗೆ 1 ತಾರೀಕಿನಂದು ಹಾಗೂ ದೀಪಾವಳಿ ಹಬ್ಬಕ್ಕೆ 13 ರಿಂದ 21ರವರೆಗೆ ರಜೆಗಳಿವೆ.
ರಾಜ್ಯ ಸರ್ಕಾರ ಹಾಗೂ ಎಲ್ಲಾ ವಿವಿಗಳೊಂದಿಗೆ ಸಮಾಲೋಚಿಸಿ ಏಕರೂಪ ಕ್ಯಾಲೆಂಡರನ್ನು ಸಿದ್ಧಪಡಿಸಲಾಗಿದೆ. ಅದನ್ನು ಕುಲಪತಿಗಳು ಹಾಗೂ ರಾಜ್ಯಪಾಲರೂ ಆಗಿರುವ ಕಲ್ಯಾಣ್ ಸಿಂಗ್’ರು ಅದಕ್ಕೆ ಅಂಕಿತ ಹಾಕಿದ್ದಾರೆ, ಎಂದು ಹೇಳಲಾಗಿದೆ.
ಈ ಸುತ್ತೋಲೆಯನ್ನು ರಡು ತಿಂಗಳುಗಳ ಹಿಂದೆ ಎಲ್ಲಾ 12 ವಿವಿಗಳಿಗೆ ಕಳುಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.