
ನವದೆಹಲಿ: ಕಪ್ಪುಹಣ ನಿಗ್ರಹ ಮತ್ತು ನಕಲಿ ನೋಟುಗಳ ನಿಗ್ರಹದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಅಪನಗದೀಕರಣ ನೀತಿಗೆ ಸೋಮವಾರ 6 ತಿಂಗಳು ಪೂರ್ಣಗೊಂಡಿತು. 2016ರ ನ.8ರಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ 500 ರು. ಮತ್ತು 1000 ಮೌಲ್ಯದ ಹಳೆಯ ನೋಟುಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದಿತ್ತು.
ನಂತರದ ದಿನಗಳಲ್ಲಿ ಜನ ತಮ್ಮ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಮತ್ತು ನೋಟುಗಳನ್ನು ಪಡೆಯಲು ದಿನಗಟ್ಟಲೆ ಬ್ಯಾಂಕ್ಗಳ ಮುಂದೆ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಹೀಗೆ ನೋಟಿಗಾಗಿ ಸರದಿಯಲ್ಲಿ ನಿಂತು ಸಾವನ್ನಪ್ಪಿದವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿತ್ತು. ಪರಿಣಾಮ ಸರ್ಕಾರ ಭಾರೀ ಟೀಕೆಯನ್ನೇ ಎದುರಿಸಬೇಕಾಗಿ ಬಂದಿತ್ತು.
2 ತಿಂಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಸರ್ಕಾರವೇನೂ ಭರವಸೆ ನೀಡಿತ್ತು. ಕ್ರಮವಾಗಿ ಮಾರುಕಟ್ಟೆಯಲ್ಲಿ ನೋಟುಗಳ ಚಲಾವಣೆ ಸರಾಗವಾದರೂ, ಎಟಿಎಂಗಳಲ್ಲಿ ಮಾತ್ರ ಈಗಲೂ ಹಣ ಇಲ್ಲ ಎಂಬ ಬೋರ್ಡ್ ಸಾಮಾನ್ಯವಾಗಿದೆ. ಮೂಲಗಳ ಪ್ರಕಾರ ಅಪನಗದೀಕರಣ ವೇಳೆ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದಿದ್ದ ನೋಟುಗಳ ಪೈಕಿ ಶೇ.60ರಷ್ಟನ್ನು ಮಾತ್ರವೇ ಇದುವರೆಗೆ ಮರುಪೂರೈಕೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.