
ಚೆನ್ನೈ: ನ್ಯಾಯಾಲಯಕ್ಕೆ ತಪ್ಪು ಮಾಹಿತಿಯ ಹೇಳಿಕೆಗಳನ್ನು ನೀಡಿದುದಕ್ಕಾಗಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಮದ್ರಾಸ್ ಹೈಕೋರ್ಟ್ನಲ್ಲಿ ಕ್ಷಮೆ ಯಾಚಿಸಿದ್ದಾನೆ.
ತಮಿಳುನಾಡಿನ ಶತಮಾನಗಳಷ್ಟುಪುರಾತನ ಶೈವಮಠ ಮದುರೈ ಅಧೀನಂನ ಮುಖ್ಯಸ್ಥ ತಾನು ಎಂದು ಪ್ರತಿಪಾದಿಸಿದುದಕ್ಕೆ ಸಂಬಂಧಿಸಿ ನಿತ್ಯಾನಂದ ಕೋರ್ಟ್ ಕ್ಷಮೆ ಕೋರಿದ್ದಾನೆ. ಈ ಸಂಬಂಧ ಆತ ನ್ಯಾ. ಮಹಾದೇವನ್ ನ್ಯಾಯಪೀಠದ ಮುಂದೆ ಅಫಿಡವಿಟ್ ಒಂದನ್ನು ಸಲ್ಲಿಸಿದ್ದಾನೆ.
ಈ ಹಿಂದಿನ ಅಫಿಡವಿಟ್ನಲ್ಲಿ ತಾನು ಮಠದ 293ನೇ ಮುಖ್ಯಸ್ಥ ಎಂಬ ತಪ್ಪು ಮಾಹಿತಿಯ ಹೇಳಿಕೆ ನೀಡಿದುದನ್ನು ಸರಿಪಡಿಸಿಕೊಳ್ಳುವಲ್ಲಿ ವಿಫಲವಾದರೆ, ನಿತ್ಯಾನಂದನ ವಿರುದ್ಧ ಬಂಧನಾದೇಶ ಜಾರಿಗೊಳಿಸಲಾಗುತ್ತದೆ ಎಂದು ಕೋರ್ಟ್ ಜ.29ರಂದು ತೀರ್ಪು ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.