ಅಂಬಾನಿಗೆ ಭರ್ಜರಿ ರಿಯಾಯ್ತಿ

Published : Jan 05, 2019, 09:50 AM IST
ಅಂಬಾನಿಗೆ ಭರ್ಜರಿ ರಿಯಾಯ್ತಿ

ಸಾರಾಂಶ

ಅಂಬಾನಿ ಕಂಪನಿಗೆ ರಿಯಾಯಿತಿ ಹಾಗೂ ವಿನಾಯಿತಿ ಎರಡೂ ಕೂಡ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸಿಕ್ಕಿತ್ತು ಎಂದು ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ : ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದದಲ್ಲಿ ಭಾರಿ ಗೋಲ್‌ಮಾಲ್‌ ನಡೆದಿದೆ ಎಂದು ಕಳೆದ ಹಲವಾರು ತಿಂಗಳುಗಳಿಂದ ನಿರಂತರವಾಗಿ ಆರೋಪ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ ಪಕ್ಷವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಹಣ ಸಿಗಲಿಲ್ಲ ಎಂಬ ಕಾರಣಕ್ಕೆ ರಾಷ್ಟ್ರೀಯ ಭದ್ರತೆಯನ್ನೂ ಕಡೆಗಣಿಸಿ, ರಫೇಲ್‌ ಒಪ್ಪಂದಕ್ಕೆ ಕಾಂಗ್ರೆಸ್‌ ತಡೆಯೊಡ್ಡಿತ್ತು ಎಂದು ಆಪಾದಿಸಿದ್ದಾರೆ. ಅಲ್ಲದೆ, ರಫೇಲ್‌ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ.

ಅನಿಲ್‌ ಅಂಬಾನಿ ಕಂಪನಿಗೆ ಮೋದಿ ನೆರವು ಮಾಡಿಕೊಟ್ಟಿದ್ದಾರೆ ಎಂಬ ರಾಹುಲ್‌ ಆರೋಪಕ್ಕೆ ಟಾಂಗ್‌ ನೀಡಿದ ನಿರ್ಮಲಾ, ಯುಪಿಎ ಅವಧಿಯಲ್ಲಿ ಅನಿಲ್‌ ಅಂಬಾನಿ ಕಂಪನಿಗೆ 53 ವಿನಾಯಿತಿ ಹಾಗೂ ರಿಯಾಯಿತಿಗಳನ್ನು ನೀಡಲಾಗಿತ್ತು ಎಂದು ಹೇಳಿದರು.

ಭಾರತ- ಫ್ರಾನ್ಸ್‌ ನಡುವೆ ಯಾವುದೇ ರಹಸ್ಯ ಒಪ್ಪಂದವಿಲ್ಲ ಎಂದು ಫ್ರಾನ್ಸ್‌ ನಾಯಕರೊಬ್ಬರು ತಮಗೆ ತಿಳಿಸಿದ್ದಾರೆ ಎಂದು ರಾಹುಲ್‌ ಹೇಳಿದ್ದಾರೆ. ರಾಹುಲ್‌ ಅವರು ತಮ್ಮ ಮಾತನ್ನು ಈ ಸದನದಲ್ಲಿ ದೃಢೀಕರಿಸುತ್ತಾರಾ ಎಂದು ಸವಾಲು ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Satish Jarkiholi: 'ಸಿದ್ದರಾಮಯ್ಯರೊಡನೆ ಅಸಮಾಧಾನ ನಮ್ಮ ಸಮಸ್ಯೆ' ಎಂದಿದ್ದ ಜಾರಕಿಹೊಳಿ ಈಗ ಮತ್ತೊಂದು ಹೇಳಿಕೆ!
Ram Temple: ಅಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಕಳವು ಪತ್ತೆ ಹಚ್ಚಿದ್ದು ಸೆಕ್ಯೂರಿಟಿ ಗಾರ್ಡ್, ಶೌಚಾಲಯದಲ್ಲಿ ಕಂಡಿದ್ದೇನು?