
ಶ್ರೀರಂಗಪಟ್ಟಣ (ನ.22): ಗಂಜಾಮ್ ಗ್ರಾಮದಲ್ಲಿರುವ ಪ್ರಸಿದ್ಧ ನಿಮಿಷಾಂಬ ದೇವಾಲಯದಲ್ಲಿ ದೇವರ ಸೀರೆ ಕಳವು ಆಗಿದೆ.
ದೇವಾಲಯದ ಅರ್ಚಕ ಮತ್ತು ಭದ್ರತಾ ಸಿಬ್ಬಂದಿಯಿಂದಲೇ ದೇವರ ಸೀರೆ ಕಳವಾಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಭಕ್ತರು ಹರಕೆ ಹೆಸರಿನಲ್ಲಿ ದೇವಿಗೆ ಕೊಟ್ಟಿದ್ದ ಬೆಲೆಬಾಳುವ ನೂರಾರು ರೇಷ್ಮೆ ಸೀರೆಗಳು ನಾಪತ್ತೆಯಾಗಿವೆ. ಸಿಸಿಟಿವಿಯಲ್ಲಿ ದೇವರ ಸೀರೆ ಕದ್ದ ಖದೀಮರ ಕಳ್ಳಾಟದ ದೃಶ್ಯ ಸೆರೆಯಾಗಿತ್ತು. ಪ್ರಕರಣ ಮುಚ್ಚಿ ಹಾಕಲು ಸಿಸಿಟಿವಿ ದೃಶ್ಯಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಕತ್ತರಿ ಹಾಕಿರುವ ಅನುಮಾನವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.